ರಾಮಾಯಣ ನಿಮಗೆಷ್ಟು ಗೊತ್ತು

Author : ಎಂ.ವಿ ನಾಗರಾಜರಾವ್

Pages 164

₹ 90.00




Year of Publication: 2010
Published by: ಸುಧಾ ಎಂಟರ್ ಪ್ರೈಸೆಸ್
Address: 761, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು- 560 034
Phone: 08022443996

Synopsys

ಹಿಂದೂಗಳ ಪಾಲಿನ ಧರ್ಮಗ್ರಂಥವೆಂದೇ ಕರೆಸಿಕೊಳ್ಳುವ ಮಹಾಕಾವ್ಯ ರಾಮಾಯಣ. ಈ ರಾಮಾಯಣವನ್ನು ಹಲವರು ಹಲವು ಬಗೆಯಲ್ಲಿ ಕಂಡಿದ್ದಾರೆ, ಕಟ್ಟಿಕೊಟ್ಟಿದ್ದಾರೆ. ಆದರೆ ರಾಮಾಯಣ ಎಂದಿಗೂ ಹೊಸತೇ ಎಂಬಂತೆ ಕಾಲದ ಪರಿದಿಯನ್ನು ಮೀರಿ ಬೆಳೆಯುತ್ತಲೇ ಇದೆ. ಆ ಮಹಾಕಾವ್ಯದ ವಿಶೇಷ ಭಾಗಗಳನ್ನು ಈ ಕೃತಿಯಲ್ಲಿ ಪಂಡಿತರಿಂದ ಪಾಮರರ ವರೆಗೂ ಅರ್ಥವಾಗುವ ರೀತಿಯಲ್ಲಿ ಹಿರಿಯ ಲೇಖಕ ನಾಗರಾಜರಾವ್ ಎಂ.ವಿ ಅವರು ಬರೆದಿದ್ದಾರೆ. ಶ್ರೀರಾಮನ ಪಟ್ಟಾಭಿಷೇಕ ಸೇರಿದಂತೆ ಹಲವು ಭಾಗಗಳನ್ನು ಸರಳ ಭಾಷೆಯಲ್ಲಿ ವಿವರಿಸಿದ್ದಾರೆ.

About the Author

ಎಂ.ವಿ ನಾಗರಾಜರಾವ್

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಎಂ.ವಿ. ನಾಗರಾಜ ರಾವ್, ಸರ್ಕಾರಿ ಜೂನಿಯರ್‍ ಕಾಲೇಜಿನ ಉಪಾನ್ಯಾಸಕರು ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಹಾಗೂ ಹಿಂದಿಯಲ್ಲಿ ಎಂ.ಎ. ಹಾಗೂ ಬಿ.ಇಡಿ. ಸಾಹಿತ್ಯ ರತ್ನ ಪೂರೈಸಿದ್ದಾರೆ. ಜೇಮ್ಸ್ ಹ್ಯಾಡ್ಲಿ ಚೇಸ್ ಅವರ 20 ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ ಹೆಗ್ಗಳಿಕೆ ಇವರದ್ದು. ಹಾಸ್ಯ-ವಿಡಂಬನೆ-ವೈಚಾರಿಕತೆ ಸೇರಿದಂತೆ ಸುಮಾರು 300ಕ್ಕೂ ಅಧಿಕ ಲೇಕನಗಳನ್ನು ಬರೆದಿದ್ದಾರೆ. ಇವರ ‘ಕಂಪನ’ ಕಾದಂಬರಿಯು ಚಲನಚಿತ್ರವಾಗಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ರಚಿಸಿದ್ದಾರೆ. 1985ರಲ್ಲಿ ಶೃಂಗಾರ ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಸುಮಾರು  242 ಪುಸ್ತಕಗಳನ್ನು ಪ್ರಕಟಿಸಿದ್ದು, ಕರ್ನಾಟಕ ಸರ್ಕಾರದಿಂದ ‘ಪುಸ್ತಕ ಸೊಗಸು’ ಪ್ರಶಸ್ತಿ ಪಡೆದಿದ್ದಾರೆ.  ಅನುವಾದಿತ ಕೃತಿಗಳು : ಜೇಮ್ಸ್‌ ಹ್ಯಾಡ್ಲಿ ...

READ MORE

Related Books