ರಾಜಕುಮಾರಿ ಅಮೃತ್‌ ಕೌರ್‌

Author : ಗೀತಾ ಶೆಣೈ

Pages 48

₹ 25.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸ್ಸೆ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಕುಮಾರಕೃಪಾ ಪಶ್ಚಿಮ, ಶಿವಾನಂದ ಸರ್ಕಲ್‌ ಹತ್ತಿರ, ಬೆಂಗಳೂರು
Phone: 08022161900

Synopsys

ಗಾಂಧಿಯವರ ಕಾರ್ಯದರ್ಶಿಯಾಗಿ 16 ವರ್ಷ ಕೆಲಸ ಮಾಡಿದ, 1942ರ 'ಕ್ವಿಟ್ ಇಂಡಿಯ ಚಳವಳಿ'ಯಲ್ಲಿ ಭಾಗವಹಿಸಿ ಕೆಲಕಾಲ ಸೆರೆಮನೆವಾಸ ಅನುಭವಿಸಿದವರು ರಾಜಕುಮಾರಿ ಅಮೃತ್‌ ಕೌರ್‌ .

ಭಾರತೀಯ ಮಹಿಳೆಯರ ಸರ್ವತೋಮುಖದ ಕನಸು ಕಾಣುತ್ತಿದ್ದ, ‘ಮಹಿಳಾ ಶಿಕ್ಷಣದ ಹಾದಿಯಲ್ಲಿರುವ ಎರಡು ಪ್ರಮುಖ ಅಡ್ಡಿಗಳೆಂದರೆ ಬಾಲ್ಯ ವಿವಾಹ ಹಾಗೂ ಪರ್ದಾ ಪದ್ಧತಿ, ಹಿಂದು ಮನೆಗಳಲ್ಲಿರುವ ವಿಧವಾ ಸ್ಥಾನಮಾನ, ಮದುವೆ ಕಾನೂನು ಹಾಗು ಮಹಿಳಾ ಆಸ್ತಿ ಹಕ್ಕಿಗೆ ಸಂಬಂಧಿಸಿದ ಕಾನೂನುಗಳು ಸಮಗ್ರವಾಗಿ ಬದಲಾಗಬೇಕು’ ಎಂದು ಸಾರಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ನೆಹರು ಅವರ ಸಚಿವ ಸಂಪುಟದಲ್ಲಿ ಆರೋಗ್ಯ ಸಚಿವೆಯ ಸ್ಥಾನವನ್ನು ಸ್ವೀಕರಿಸಿದ ಅಮೃತ್ ಕೌರ್, ಎರಡು ಅವಧಿಗೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು. ಸ್ವಾತಂತ್ಯ್ರ ಭಾರತದ ಮೊದಲ ಸಚಿವೆ ಎಂತಲೇ ಹೆಸರಾಗಿರುವ ಅಮೃತ್‌ ಕೌರ್‌ ಅವರ ಬದುಕು-ರಾಜಕೀಯ ಸಾಧನೆಗಳ ಕುರಿತು ಗೀತಾ ಶೆಣೈ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಡಾ. ನಾ. ಸೋಮೇಶ್ವರ ಸಂಪಾದಿಸಿದ್ದಾರೆ.

About the Author

ಗೀತಾ ಶೆಣೈ
(13 June 1954)

ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'.   ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...

READ MORE

Related Books