ರಾಜಶೇಖರನ ಕನ್ನಡ ಕಾವ್ಯಮೀಮಾಂಸೆ

Author : ಕೆ.ಕೃಷ್ಣಮೂರ್ತಿ

Pages 302

₹ 280.00




Year of Publication: 2014
Published by: ಡಾ.ಕೆ.ಕೃಷ್ಣಮೂರ್ತಿ ಸಂಸ್ಕೃತ ಸಂಶೋಧನ ಪ್ರತಿಷ್ಠಾನ
Address: #22, ಚಿರಂತನ, ಕೃಷ್ಣಮೂರ್ತಿ ಲೇಔಟ್, 1ನೇ ಮುಖ್ಯರಸ್ತೆ, ಮೈಸೂರು-570009
Phone: 9448553797

Synopsys

ರಾಜಶೇಖರ ಕವಿಯ ಮೂಲ ಸಂಸ್ಕೃತ ಗ್ರಂಥವನ್ನು ಡಾ. ಕೆ.ಕೃಷ್ಣಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ. ಪೀಠಿಕೆ, ಮೂಲ ಭಾಷಾಂತರ, ಅಡಿಟಿಪ್ಪಣೆ ಹಾಗೂ ಸೂಚಿಗಳನ್ನೂ ಸಹ ಅಧ್ಯಯನದ ಅನುಕೂಲಕ್ಕಾಗಿ ನೀಡಲಾಗಿದೆ. ಕವಿಯಾಗಬೇಕು ಎನ್ನುವವರಿಗೆ, ರಸಿಕತೆ ಪಡೆಯಬೇಕು ಎನ್ನುವವರಿಗೆ ಕವಿ ರಾಜಶೇಖರನು ಮಾರ್ಗದರ್ಶನ ಮಾಡಿದವರಲ್ಲಿ ಮೊದಲಿಗ. ಇಲ್ಲಿ ಶಾಸ್ತ್ರದ ಗಹನ ಜಟಿಲ ತತ್ವಗಳಿಲ್ಲ. ತರ್ಕದ ಕರ್ಕಶ ವಿವಾದಗಳಿಲ್ಲ. ಇಲ್ಲಿ ಕಥೆ ಇದೆ. ಐತಿಹ್ಯವಿದೆ. ಇತಿಹಾಸವಿದೆ. ಕುಕವಿಯಿಂದ ಸುಕವಿಯವರೆಗೆ ಎಷ್ಟು ಬಗೆಯ ಕವಿಗಳಿರಬಹುದು? ಕಾವ್ಯದ ಪ್ರಕಾರಗಳೆಷ್ಟು?, ಸಾಹಿತ್ಯ ಅಂಶವೇನು? ಇಂತಹ ಪ್ರಶ್ನೆಗಳು ರಾಜಶೇಖರ ಗಂಭೀರವಾಗಿ ಚರ್ಚೆಗೆ ಪ್ರೇರಣೆ ಇತ್ತಿದ್ದಾನೆ.

’ಡಾ. ಕೆ.ಕೃಷ್ಣಮೂರ್ತಿ ಅವರು ಈ ಕೃತಿಯನ್ನು ತಮ್ಮ ವಾಗ್ವಿನ್ಯಾಸದ ಲಾಸ್ಯದಿಂದ ಓದುಗರಿಗೆ ಕಾವ್ಯ ಚಮತ್ಕಾರದ ದಿವ್ಯ ದರ್ಶನ ಮಾಡಿಸಿದ್ದಾರೆ’ ಎಂದು ಕೃತಿಯ ಮುನ್ನುಡಿ ಬರೆದ ಡಾ. ಕೆ. ಲೀಲಾ ಪ್ರಕಾಶ್ ಅವರು ಪ್ರಶಂಸಿಸಿದ್ದಾರೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books