ರಕ್ತಚಂದನ

Author : ಸಿ.ಎಸ್. ನಾಗೇಶ್ ಕುಮಾರ್

Pages 232

₹ 175.00




Year of Publication: 2018
Published by: ಶ್ರೀನಿವಾಸ ಪುಸ್ತಕ ಪ್ರಕಾಶನ
Address: 164/ಎ ಮೊದಲನೇ ಮಹಡಿ, ಎಂ.ಆರ್.ಎನ್ ಕಟ್ಟಡ, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 9844048406

Synopsys

ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾದ ಪತ್ತೇದಾರಿ ಕತೆಗಳ ಸಂಕಲಿತ ರೂಪವೇ ರಕ್ತಚಂದನ. ಈ ಪುಸ್ತಕದಲ್ಲಿ ಒಟ್ಟು ೧೭ ಕತೆಗಳಿದ್ದು ಬಹಳಷ್ಟು ಕತೆಗಳು ಅಪರಾಧ, ಕೊಲೆ, ಕಳ್ಳತನ ಇತ್ಯಾದಿ ಪತ್ತೇದಾರಿಕೆಗೆ ಒಳಪಡುವ ಕತೆಗಳೇ ಆಗಿವೆ. ಅಂದಮಾತ್ರಕ್ಕೆ ಅದೇ ವಸ್ತು ಎಂದು ತಿಳಿಯಬೇಡಿ, ಸಾಮಾಜಿಕ, ಯುವ ಪೀಳಿಗೆಯ, ಸಂದೇಶವಿರುವ , ಸನ್ನಡತೆ ಎತ್ತಿ ತೋರುವ ಕತೆಗಳೂ ಇವೆ. ಇದಕ್ಕೆ ಉದಾ, ” ಮಾರುತಿಯ ಟ್ರೀಟ್” ಈ ಕತೆ ಚಿಕ್ಕದು, ಆದರೆ ಉದಾತ್ತ ವಸ್ತುವನ್ನು ಒಳಗೊಂಡದ್ದು. ಇಂತಹ ವಿಭಿನ್ನ ಕಥಾವಸ್ತುಗಳುಳ್ಳ ಹಲವಾರು ಕತೆಗಳು ಈ ಕೃತಿಯಲ್ಲಿವೆ. 

About the Author

ಸಿ.ಎಸ್. ನಾಗೇಶ್ ಕುಮಾರ್

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...

READ MORE

Related Books