ರಕ್ತಾಕ್ಷಿ

Author : ಕುವೆಂಪು (ಕೆ.ವಿ. ಪುಟ್ಟಪ್ಪ)

₹ 90.00




Year of Publication: 2014
Published by: ಉದಯರವಿ ಪ್ರಕಾಶನ
Address: 1354/1 ಕೃಷ್ಣಮೂರ್ತಿಪುರಂ, ಮೈಸೂರು 570004
Phone: 0821 2332971

Synopsys

ಬಿದನೂರಿನ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವಂತಹ ನಾಟಕ ರಕ್ತಾಕ್ಷಿ. 1932ರಲ್ಲಿ ಮೊದಲ ಬಾರಿಗೆ ಈ ನಾಟಕ ಪ್ರಕಟವಾಯಿತು. ಇಪ್ಪತ್ತಕ್ಕೂ ಹೆಚ್ಚು ಪಾತ್ರಗಳನ್ನು ಹೊಂದಿರುವ ಈ ನಾಟಕವನ್ನು ಐದು ದೃಶ್ಯಗಳಲ್ಲಿ ಬರೆಯಲಾಗಿದೆ. ನಾಟಕ ವಿಮರ್ಶಕರು ರಕ್ತಾಕ್ಷಿ ನಾಟಕವನ್ನು ಇಂಗ್ಲೀಷ್‍ನ ಹ್ಯಾಮ್ಲೆಟ್‍ ನಾಟಕದೊಂದಿಗೆ ವಿಮರ್ಶಿಸಿದ್ದಾರೆ. ಬಿದನೂರಿನಲ್ಲಿ ನಡೆದಂತಹ ರಾಜ ಮನೆತನದ ಕಥೆಯನ್ನು ಈ ನಾಟಕದಲ್ಲಿ ಸವಿವರವಾಗಿ ವರ್ಣಿಸಲಾಗಿದೆ. ಈ ನಾಟಕದಲ್ಲಿ ಛಂದಸ್ಸುಗಳನ್ನು ಉಪಯೋಗಿಸಿಲ್ಲ. ಇಲ್ಲಿರುವುದು ಸಂಪೂರ್ಣ ಗದ್ಯ. ಮೈಸೂರು ಚರಿತ್ರೆಯ ಪುಟಗಳಲ್ಲಿ ದಾಖಲಾಗಿರುವ ಕಥಾನಕದ ಪ್ರಕಾರ ಹೈದರನು ಯಾವ ರೀತಿ ಬಿದನೂರು ರಾಜರ ಮೇಲೆ ದಾಳಿ ಮಾಡಿ, ರಾಜ ಬಸಪ್ಪನಾಯಕನನ್ನು ಸೋಲಿಸುತ್ತಾನೆಂದು ಹೇಳುವ ಕಥೆಯನ್ನು ನಾಟಕವಾಗಿ ವಿವರಿಸಲಾಗಿದೆ. ಬಸಪ್ಪ ನಾಯಕನ ಪತ್ನಿ ನಿಂಬಣ್ಣ ಎಂಬುವವನೊಂದಿಗೆ ಸಂಬಂಧವಿಟ್ಟುಕೊಂಡಿದ್ದಾಳೆಂದು ತಿಳಿದು ಅದನ್ನು ವಿರೋಧಿಸಿದ ಅವಳ ದತ್ತು ಪುತ್ರನನ್ನು ಯಾವ ರೀತಿ ಮೋಸದಿಂದ ಕೊಲ್ಲುತ್ತಾಳೆ ಹಾಗೂ ಅವಳಿಂದಾಗಿ ಬಿದನೂರು ರಾಜ್ಯ ಯಾವ ರೀತಿ ಅಂತ್ಯಕ್ಕೆ ಸಮೀಪವಾಗುತ್ತದೆ ಎಂಬುದನ್ನು ಈ ನಾಟಕದಲ್ಲಿ ಸ್ವಾರಸ್ಯಕರವಾಗಿ ಸಂಯೋಜಿಸಲಾಗಿದೆ. ಮಲೆನಾಡಿನ ಮೇಲೆ ವ್ಯಾಪಕ ವ್ಯಾಮೋಹ ಹೊಂದಿದ್ದ ಕುವೆಂಪು ಅವರು ಇಲ್ಲಿಯೂ ಮಲೆನಾಡಿನ ಕಥೆಯನ್ನೇ ಆರಿಸಿಕೊಂಡಿದ್ದಾರೆ.

About the Author

ಕುವೆಂಪು (ಕೆ.ವಿ. ಪುಟ್ಟಪ್ಪ)
(29 December 1904 - 11 November 1994)

ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...

READ MORE

Related Books