ರಾಮಧಾನ್ಯ

Author : ರಾಮಕೃಷ್ಣ ಮರಾಠೆ

Pages 34

₹ 50.00




Year of Publication: 2010
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ
Address: ಕಾಗಿನೆಲೆ, ಬ್ಯಾಡಗಿ ತಾಲ್ಲೂಕು, ಹಾವೇರಿ ಜಿಲ್ಲೆ
Phone: 08375-289388

Synopsys

ಶ್ರೀರಾಮಚಂದ್ರರ ಪರಿವಾರದ ಒಂದು ಪರಿ, ಕನಕ ಮತ್ತು ಅವರ ಶಿಷ್ಯಂದಿರ ಇನ್ನೊಂದು ಪರಿ. ಎರಡನ್ನೂ ಗಮನಿಸಿದರೆ, ಇವೆರಡೂ ಭಿನ್ನ ಪ್ರಕೃತಿಯ ಸನ್ನಿವೇಶಗಳು ಎನ್ನುತ್ತದೆ ಲೇಖಕ ರಾಮಕೃಷ್ಣ ಮರಾಠೆ ಅವರ ‘ರಾಮಧಾನ್ಯ’ ಕೃತಿ. ‘ಕನಕದಾಸರ ರಾಮಧಾನ್ಯ ಚರಿತೆ’ ಆಧಾರಿತ ನಾಟಕವಿದು. ಮುಖ್ಯವಾಗಿ ಈ ನಾಟಕ ಎರಡು ನೆಲೆಗಳಲ್ಲಿ ನಡೆಯುತ್ತದೆ. ಒಂದು ರಾಗಿ ರಾಮಧಾನ್ಯವಾದ ಕಥೆ. ಮತ್ತೊಂದು ತಿಮ್ಮಪ್ಪನಾಯಕ ಕನಕದಾಸನಾದ ಕಥೆ. ಎರಡೂ ಒಂದಕ್ಕೊಂದು ಸೇರಿ ನಾಟಕದ ಧ್ವನಿಯನ್ನು ವಿಸ್ತರಿಸಿವೆ. ಈ ಕಾವ್ಯ ಎರಡೆರಡು ದೃಶ್ಯಾವಳಿಗಳನ್ನು, ಘಟನೆಗಳನ್ನು ತೋರಿಸುತ್ತಲೇ ಒಂದು ತಾತ್ವಿಕ ಸಿದ್ಧಾಂತದ ಕಡೆಗೆ ಕರೆದೊಯ್ಯುತ್ತದೆ. ವೈವಿಧ್ಯತೆ ಮೇಲು- ಕೀಳೆಂಬ ಭಾವನೆಗೆ ತುತ್ತಾಗಬಾರದು. ಎಲ್ಲವೂ ಪರಮಾತ್ಮನ ನಿರ್ಮಿತಿ ಎಂದ ಮೇಲೆ ಮೇಲು-ಕೀಳು ಎಂಬುದು ತಪ್ಪು. ಈ ಸಂದೇಶವನ್ನೇ ಸಾರುವ ಉದ್ದೇಶ ‘ರಾಮಧ್ಯಾನ’ ಕಾವ್ಯಕ್ಕಿದೆ. ಇಲ್ಲಿ ಭತ್ತ ಮತ್ತು ರಾಗಿಯ ವಾರ್ತಾಲಾಪ ಸ್ವಾಭಾವಿಕವಾಗಿದೆ. ಭತ್ತಕ್ಕೆ ಮಾಂಗಲ್ಯದ ಸ್ಪರ್ಶವಿದೆ. ರಾಗಿ ಅಮಂಗಲವಲ್ಲ ಎಂಬ ಮಾತು ಕೂಡ ಸ್ಪಷ್ಟವಾಗಿದೆ. ರಾಮಧಾನ್ಯ ಚರಿತೆಯು ಕನಕದಾಸರ ಅದ್ಭುತ ಪ್ರತಿಭೆಯಿಂದ ಹೊರಹೊಮ್ಮಿದ ಅನ್ಯೋಕ್ತಿಕಾವ್ಯ. ಭೂಮಿಕೆಯಲ್ಲಿ ಕಾಣಬಹುದಾದ ಪಾತ್ರಗಳು; ಕನಕದಾಸ, ದೊಡ್ಡದಾಸಯ್ಯ, ಸಣ್ಣ ದಾಸಯ್ಯ, ರಾಮ, ಲಕ್ಷಣ, ಭರತ, ಶತೃಘ್ನ, ಹನುಮ, ಸೀತೆ, ರಾಗಿ, ಭತ್ತ, ಆದಿವಾಸಿ ಹೆಂಗಸರು, ಸೂರ್ಯಕಾಂತಿ, ಜೋಳ, ಗೋಧಿ, ಮಹರ್ಷಿಗಳು, ನೃತ್ಯಗಾರ್ತಿಯರು ಇಲ್ಲಿ ಬಹು ಮುಖ್ಯವಾಗಿದ್ದಾರೆ.

About the Author

ರಾಮಕೃಷ್ಣ ಮರಾಠೆ
(25 May 1958)

ನಾಟಕಕಾರ ರಾಮಕೃಷ್ಣ ಮರಾಠೆ ಅವರು 1958 ಮೇ 25 (ಸಿಂದಗಿ-ಬಿಜಾಪುರ) ಜನಿಸಿದರು. ಕನ್ನಡಲ್ಲಿ ಪಿಎಚ್‌.ಡಿ ಪದವೀಧರರು. ಕನ್ನಡ ಅಧ್ಯಾಪಕರು. ‘ಉತ್ತರ ಕರ್ನಾಟಕದ ರಂಗಭೂಮಿ, ಕೊಣ್ಣೂರ ನಾಟಕ ಕಂಪನಿ, ಈ ರಂಗಭೂಮಿಯ ಕನ್ನಡ ಸಂವೇದನೆ’ ಅವರ ಸಂಶೋಧನಾ ಕೃತಿಗಳು. ‘ರಾಮಧಾನ್ಯ, ದಾಸೋಹ; ಅಲ್ಲಮಲೀಲೆ’ ಅವರ ಪ್ರಮುಖ ನಾಟಕ. ‘ಬಿ.ಆರ್. ಅರಿಷಿಣಗೋಡಿ; ಬೆಳಗಾವಿ ಭಗೀರಥ; ವಿಶ್ವನಾಥ ಕತ್ತಿ’ ಅವರ ಜೀವನ ಚಿತ್ರಣ ಕೃತಿಗಳನ್ನು ಸಂಪಾದಿಸಿದ್ದಾರೆ.  ‘ಹರಿಹರನ ನಾಲ್ಕು ರಗಳೆಗಳು, ನಾಟ್ಯಭೂಷಣ ಏಣಗಿ ಬಾಳಪ್ಪ, ವೃತ್ತಿ ರಂಗದ ಮಹತ್ತರ ನಾಟಕಗಳು’ ಅವರ ಸಂಪಾದಿತ ಕೃತಿಗಳು. ಅಲ್ಲದೆ ‘ದಕ್ಷಿಣದ ದೇಸೀ ದೇವರು ಶ್ರೀ ಖಂಡೋಬಾ; ಭವಿರ ...

READ MORE

Related Books