ರಂಗ ಕೈರಳಿ

Author : ಕಿರಣ್ ಭಟ್

Pages 120

₹ 150.00




Year of Publication: 2020
Published by: ಬಹುರೂಪಿ
Address: ಎಂಬೆಸಿ ಸೆಂಟರ್, 111, ಫಸ್ಟ್ ಫ್ಲೋರ್, ಕ್ರೆಸೆಂಟ್ ರೋಡ್, ಕುಮಾರಪಾರ್ಕ್ ಈಸ್ಟ್, ಬೆಂಗಳೂರು- 560001

Synopsys

‘ರಂಗ ಕೈರಳಿ’ ಕಿರಣ್ ಭಟ್ ಅವರ ಪ್ರವಾಸ ಕಥನ. ರಂಗ ಪ್ರವಾಸಕಥನ ಅಂತಲೂ ಗುರುತಿಸಬಹುದಾಗಿದೆ. ಏಕೆಂದರೆ ಇದು ರಂಗಭೂಮಿಗೆ ಸಂಬಂಧಿಸಿದ ಕಥನ. ಈ ಕೃತಿಗೆ ಲೇಖಕ ಜಿ.ಎನ್. ಮೋಹನ್ ಬೆನ್ನುಡಿ ಬರೆದು ‘ಕಿರಣ್ ಭಟ್ ನಮ್ಮ ಕೈಹಿಡಿದು ಕೇರಳಕ್ಕೆ ಕೊಂಡೊಯ್ಯುತ್ತಾರೆ. ಊರು ತೋರಿಸಲು ಅಲ್ಲ. ಇಡೀ ಜಗತ್ತು ಬೆಕ್ಕಸ ಬೆರಗಾಗುವಂತೆ ನಾಟಕ ಕಟ್ಟುವ ಕೇರಳದಲ್ಲಿ ತಾವು ಅನುಭವಿಸಿದ ರಂಗ ಸಂಭ್ರಮವನ್ನು ಪರಿಚಯಿಸಲು’ ಎನ್ನುತ್ತಾರೆ. ರಂಗಕರ್ಮಿ ಕಿರಣ್ ಭಟ್ ಲವಲವಿಕೆಯ ಪಾದರಸದಂತಹ ವ್ಯಕ್ತಿ. ಹಾಗಾಗೇ ಈ ಕೃತಿ ಕೇರಳದ ಪ್ರವಾಸಕಥನವೂ ಹೌದು, ರಂಗ ನಾಟಕಗಳ ಸುಗ್ಗಿಯೂ ಹೌದು.

About the Author

ಕಿರಣ್ ಭಟ್

ಕಿರಣ್ ಭಟ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು.‌ ಹೊನ್ನಾವರದಲ್ಲಿ ಬಿ.ಎಸ್.ಸಿ ಪದವಿ ಪಡೆದ ನಂತರ ಟೆಲಿಕಾಂ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಹುಬ್ಬಳ್ಳಿ, ತಿರುವನಂತಪುರಂ, ಶಿರಸಿ, ಮಂಗಳೂರು, ಕುಮಟಾ, ಕಾರವಾರ, ಎರ್ನಾಕುಲಂ,ಕಣ್ಣಾನೂರಿನಲ್ಲಿ‌ ಸೇವೆ ಸಲ್ಲಿಸಿ ಸದ್ಯ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕಾಲೇಜು ದಿನಗಳಿಂದಲೇ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದ ಕಿರಣ್ ಭಟ್ ಮಂಗಳೂರು ಸಮುದಾಯ,ಆಯನ ತಂಡಗಳ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಶಿರಸಿಯಲ್ಲಿ 'ರಂಗಸಂಗ' ತಂಡದ ಸ್ಥಾಪಿಸಿ, ನಾಟಕಗಳನ್ನು ನಿರ್ದೇಶಿಸಿದ್ದಾರೆ. ಐವತ್ತಕ್ಕೂ ಹೆಚ್ಚು ಮಕ್ಕಳ ನಾಟಕಗಳನ್ನು ಹಾಗೂ ಮಕ್ಕಳ ರಂಗಶಿಬಿರಗಳ ನಿರ್ದೇಶಿಸಿದ್ದಾರೆ. ರಂಗಭೂಮಿ ಸೇವೆಗಾಗಿ 1999 ರಲ್ಲಿ ' ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ, ' ...

READ MORE

Related Books