ರಂಗ ಸಂಘಟಕರು

Author : ಕೆ.ವಿ. ನಾಗರಾಜ ಮೂರ್ತಿ

Pages 118

₹ 40.00




Year of Publication: 2001
Published by: ಕರ್ನಾಟಕ ನಾಟಕ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು
Phone: 08022237484

Synopsys

ನಾಟಕ ಪ್ರಯೋಗದಲ್ಲಿ ಸಂಘಟನಕಾರ ಬಹಳ ಪ್ರಮುಖ ಪಾತ್ರವಹಿಸುತ್ತಾರೆ. ಈ ಸಂಘಟನೆಕಾರ ತನ್ನ ಕಾರ್ಯದಲ್ಲಿ ಎಷ್ಟು ಸಮರ್ಥನು ಅನ್ನುವುದರ ಮೇಲೆ ನಾಟಕದ ಯಶಸ್ಸು, ನಾಟಕದ ಗುಣಮಟ್ಟ ಅವಲಂಬಿಸಿರುತ್ತದೆ. ಪ್ರಯೋಗಕ್ಕೆ ಇಂತಹ ನಾಟಕ ಅನ್ನುವುದನ್ನು, ನಾಟಕ ತಂಡ ಗೊತ್ತುಮಾಡಿದ ಮೇಲೆ, ಸಂಘಟನಕಾರ ಕ್ರಿಯಾಶೀಲನಾಗುತ್ತಾನೆ. ತಾಲೀಮು ಕೊಠಡಿ ಗೊತ್ತುಪಡಿಸುವುದು, ವಿವಿಧ ಪಾತ್ರಗಳ ಆಯ್ಕೆಯ ಸಲುವಾಗಿ ನಟರನ್ನು ಕೂಡಿಸುವುದು, ಥಿಯೇಟರ್‌ ಗೊತ್ತುಪಡಿಸಿ ಪ್ರಚಾರ ಕೊಟ್ಟು, ವಿವಿಧ ತಂತ್ರಜ್ಞರನ್ನು ಕಲೆ ಹಾಕಿ, ಸಿದ್ಧಗೊಂಡ ನಾಟಕ ರಂಗವೇರಿ, ಅದರ ಯಶಸ್ವೀ ಮುಕ್ತಾಯ ಆಗುವವರೆಗೂ ಆತನ ಪ್ರಯತ್ನ ಮುಂದುವರಿದಿರುತ್ತದೆ. ಪ್ರಸ್ತುತ ಕೃತಿಯು ರಂಗ ಸಂಘಟನೆಕಾರರನ್ನು ಪರಿಚಯಿಸುವ ಕೃತಿಯಾಗಿದೆ. ಕೆ.ವಿ. ನಾಗರಾಜಮೂರ್ತಿ ಹಾಗೂ ಬಿ.ಟಿ. ಮುನಿರಾಜಯ್ಯ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ.

About the Author

ಕೆ.ವಿ. ನಾಗರಾಜ ಮೂರ್ತಿ

ಕೆ.ವಿ. ನಾಗರಾಜ ಮೂರ್ತಿ ಅವರು ಹಿರಿಯ ನಟ, ಸಂಘಟಕ. ಅವರಿಗೆ ಮುದ್ರಾಡಿ ನಾಟ್ಕ ಸಂಮಾನ-2019 ರ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ರಾಷ್ಟ್ರೀಯ ಹಾಗೂ ಆಂತಾರಾಷ್ಟ್ರೀಯ ಉತ್ಸವಗಳ ಸಂಚಾಲಕರಾಗಿ ಕೆಲಸ ಮಾಡಿದ್ದಾರೆ. ...

READ MORE

Related Books