ರಂಗವಿಹಾರ

Author : ಪ್ರಕಾಶ್ ಕಂಬತ್ತಳ್ಳಿ

Pages 96

₹ 80.00




Year of Publication: 2019
Published by: ಅಂಕಿತ ಪುಸ್ತಕ
Address: #53,ಶಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560004
Phone: 26617100

Synopsys

ಪ್ರಕಾಶಕ ಹಾಗೂ ಲೇಖಕ ಪ್ರಕಾಶ್ ಕಂಬತ್ತಳ್ಳಿ ಅವರ ‘ರಂಗವಿಹಾರ’ ಕೃತಿಯು ಲೇಖನಗಳ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಾಹಿತಿ ವಿಜಯಾ, ತಾವು ಆಯ್ದ ಯಾವುದೇ ವಿಷಯವನ್ನೂ ಸಂಶೋಧನೆ, ಆಳವಾದ ಅಧ್ಯಯನಕ್ಕೆ ಒಳಪಡಿಸುವ ಕಂಬತ್ತಳ್ಳಿ , ಅತಿ ಸೂಕ್ಷ್ಮ ಕಣ್ಣು- ಕಿವಿಯ ಸಂಗ್ರಾಹಕ ಮನಸ್ಸಿನವರು. ಆದ್ದರಿಂದಲೇ, ಈ ಸಂಕಲನದ ಲೇಖನಗಳಿಗೆ ಒಂದು ಅಧಿಕೃತತೆ ಲಭ್ಯವಾಗಿದೆ. ರಂಗಭೂಮಿಯ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಒಂದು ಸೈದ್ದಾಂತಿಕ ಚೌಕಟ್ಟಿನ ಒಳಾವರಣಕ್ಕೆ ಸಾಗುವ ಅವರ ಲೇಖನ ರಚನೆಯ ವಿಧಾನದಲ್ಲೇ ಹೊಸತನ, ಶ್ರದ್ದೆ ಎಂದು ಕಾಣುತ್ತದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಪ್ರಕಾಶ್ ಕಂಬತ್ತಳ್ಳಿ

ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರಿಗೆ ರಂಗಭೂಮಿಯ ಕಡೆ ಒಲವು. ನಾಟಕಶಾಸ್ತ್ರದಲ್ಲಿ ಬಿ. ಎ ಹಾಗೂ ಕನ್ನಡದಲ್ಲಿ ಎಂ. ಎ ಪದವೀಧರರು. ಕಥೆಗಾರರು. ಅನುವಾದಕರು. ವಿವಿಧ ಸಂಸ್ಥೆಗಳಲ್ಲಿ ಸಂಪಾದಕರಾಗಿ ದುಡಿದಿದ್ದಾರೆ. 1995ರಲ್ಲಿ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆಯನ್ನು ಸ್ಥಾಪಿಸಿ ಹೊಸ ಕಥೆಗಾರರಿಗೆ ಮತ್ತು ಪ್ರೇಕ್ಷಕರಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿದ್ದರು. ಕೆಲ ಕಾಲ ಶಿಕ್ಷಕರಾಗಿಯೂ ಕೆಲಸ ಮಾಡಿದ್ದಾರೆ.  ಕೃತಿಗಳು ; ಅನ್ವೇಷಕರು ಮತ್ತು ಇತರ ನಾಟಕಗಳು, ಕಂಪ್ಯೂಟರ್ ಸೇವಕ ಮತ್ತು ಇತರ ನಾಟಕಗಳು, ಮಕ್ಕಳಿಗಾಗಿ ಮತ್ತೆ ಹೇಳಿದ ನಸಿರುದ್ದೀನನ ಕತೆಗಳು, ...

READ MORE

Related Books