ರಂಗಕರ್ಮಿ ಸದಾನಂದ ಸುವರ್ಣ

Author : ಸೀತಾಲಕ್ಷ್ಮೀ ಕರ್ಕಿಕೋಡಿ

Pages 48

₹ 33.00




Year of Publication: 2007
Published by: ಕನ್ನಡ ಸಂಘ, ಕಾಂತಾವರ
Address: ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನ, ಕಾಂತಾವರ, ಅಂಚೆ-ಕಾಂತಾವರ-574129, ಕಾರ್ಕಳ ತಾಲ್ಲೂಕು, ಉಡುಪಿ ಜಿಲ್ಲೆ
Phone: 8548933733

Synopsys

ಕಾಂತಾವರ ಕನ್ನಡ ಸಂಘದ ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ ಎಂಟನೆಯ ಪುಸ್ತಕ ರಂಗ ಕರ್ಮಿ ಸದಾನಂದ ಸುವರ್ಣ. ಚಲನಚಿತ್ರರಂಗದ ಅತ್ಯುತ್ತಮ ಸ್ವರ್ಣಕಮಲ ಪ್ರಶಸ್ತಿ ಪಡೆದಿರುವ ಸದಾನಂದ ಸುವರ್ಣ ಅವರು ನಿರ್ದೇಶಕ, ನಿರ್ಮಾಪಕ, ನಟ. ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿಯಲ್ಲಿ ಹುಟ್ಟಿದ ಅವರು ಬೆಳೆದದ್ದು ಮುಂಬಯಿಯಲ್ಲಿ. ಅಲ್ಲಿಯೇ ಬದುಕು ಮತ್ತು ರಂಗಭೂಮಿಯ ಎರಡನ್ನೂ ಕಟ್ಟಿದವರು. ರಂಗಭೂಮಿಯ ಸಾಧಕರಲ್ಲಿ ಮುಂಚೂಣಿಯಲ್ಲಿರುವ ಅವರಿಗೆ ಹೊಸ ಸಾಧ್ಯತೆಗಳ ಚಿಂತನೆಯೇ ಬದುಕು. ಮುಂಬಯಿಯಲ್ಲಿ ರಂಗಶಿಕ್ಷಣ ಕೇಂದ್ರವನ್ನು ಸ್ಥಾಪಿಸಿರುವ ಅವರಿಂದ ಹಲವು ನಾಟಕಗಳು, ಉತ್ತಮ ಕಲಾತ್ಮಕ ಚಿತ್ರಗಳು ಸೃಷ್ಟಿಯಾದುವು. ಗುಡ್ಡದ ಭೂತ ಎನ್ನುವ ಟೆಲಿಚಿತ್ರ, ಡಾ. ಶಿವರಾಮ ಕಾರಂತ, ಬ್ರಹ್ಮಶ್ರೀ ನಾರಾಯಣಗುರು ಅವರ ಸಾಕ್ಷ್ಯಚಿತ್ರಗಳು ಅವರು ಕಿರುತೆರೆಗೆ ನೀಡಿದ ದೊಡ್ಡ ಕೊಡುಗೆ. ಸುವರ್ಣಗಿರಿ ಪ್ರಕಾಶನ, ಸದಾನಂದ ಸುವರ್ಣ ಪ್ರತಿಷ್ಠಾನಗಳ ಮೂಲಕ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡಿರುವ ಸುವರ್ಣರದ್ದು ಅದಮ್ಯ ಚೇತನ, ಸರಳ ನಿರಾಡಂಬರ ಚಿತ, 75ರ ಇಳಿವಯಸ್ಸಿನಲ್ಲೂ ರಂಗಭೂಮಿಯ ಬಗ್ಗೆಯೇ ಕನಸು ಕಾಣುವ ಅವರು ರಂಗಭೂಮಿಯ ಜಂಗಮ. ಸುವರ್ಣ ಅವರನ್ನು ಕುರಿತ ಕಿರು ಪರಿಚಯ ನೀಡುವ ಕೃತಿಯಿದು.

About the Author

ಸೀತಾಲಕ್ಷ್ಮೀ ಕರ್ಕಿಕೋಡಿ - 12 May 2020)

ಉತ್ತರ ಕನ್ನಡ ಮೂಲದ ಡಾ. ಸೀತಾಲಕ್ಷ್ಮಿ ಕರ್ಕಿಕೋಡಿ ಅವರು ಜನಿಸಿದ್ದು ದಕ್ಷಿಣ ಕನ್ನಡದ ಅಡ್ಯನಡ್ಕದಲ್ಲಿ. ಅಡ್ಯನಡ್ಕ, ಪುತ್ತೂರುಗಳಲ್ಲಿ ಪ್ರಾಥಮಿಕ, ಪ್ರೌಢ, ಕಾಲೇಜು ವಿದ್ಯಾಭ್ಯಾಸ ಪೂರೈಸಿರುವ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದರು. 'ಮಾಸ್ತಿಯವರ ಕತೆಗಳಲ್ಲಿ ಸ್ತ್ರೀ ಪ್ರತಿನಿಧೀಕರಣ' ಎಂಬ ಮಹಾಪ್ರಬಂಧ ರಚಿಸಿ ಹಂಪಿ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರಾಮರ್ಶೆ' ಎಂಬ ವಿಮರ್ಶಾ ಸಂಕಲನ ಪ್ರಕಟಿಸಿರುವ ಅವರು 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದರು. 12-05-2020 ರಂದು ಸೀತಾಲಕ್ಷ್ಮಿ ಅವರು ನಿಧನರಾದರು. ...

READ MORE

Related Books