ರಾಷ್ಟ್ರಕವಿ ಸಂದರ್ಶನ

Author : ದೇಜಗೌ (ದೇ. ಜವರೇಗೌಡ)

Pages 96

₹ 18.00




Year of Publication: 1984
Published by: ಸಹ್ಯಾದ್ರಿ ಪ್ರಕಾಶನ
Address: ಶ್ರೀ ಕುವೆಂಪು ವಿದ್ಯಾ ಪರಿಷತ್ತು ಕವಿಶೈಲ, ಜಯಲಕ್ಷ್ಮೀಪುರಂ, ಮೈಸೂರು – 12

Synopsys

ನಾಡಿನ ಕವಿಗಳ ಒಲವು – ನಿಲುವುಗಳನ್ನು ತಿಳಿದುಕೊಳ್ಳಲು, ಅವರ ಲೋಕಾನುಭವದ ಮಹತ್ವವನ್ನು ಗ್ರಹಿಸಲು ಶ್ರೀ ಕುವೆಂಪು ವಿದ್ಯಾಪರಿಷತ್ತಿನ  ’ಸಹ್ಯಾದ್ರಿ ಪ್ರಕಾಶನ’ದ ಮೂಲಕ ಪ್ರಕಟಿಸಲಾಗಿದೆ. ಕವಿಗಳನ್ನು ಸಂದರ್ಶಿಸಿದಾಗ ಗುರುತು ಮಾಡಿಕೊಂಡ ಟಿಪ್ಪಣಿಗಳ ಆಧಾರದ ಮೇಲೆ ಈ ಸಂವಾದಗಳು ಮೂಡಿವೆ. ಸಾಧ್ಯವಾದಷ್ಟೂ ಕವಿಗಳ ಮಾತನ್ನು ಬಳಸಿಕೊಳ್ಳುವ ಮೂಲಕ ಹೊರತಂದಿರುವ ಸಂದರ್ಶನ ಮಾಲೆಯ ಮುಖ್ಯ ಸಂದರ್ಶಕರಾದ ಹೆಸರಾಂತ ಸಾಹಿತಿ  ದೇ. ಜವರೇ ಗೌಡರು (ದೇ.ಜ. ಗೌ).  ಕುವೆಂಪು ಅವರ ಶಿಷ್ಯರಾಗಿ ಅವರ ಮಾರ್ಗದರ್ಶನದಿಂದ ಕನ್ನಡದ ಹೆಸರಾಂತ ಗದ್ಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ.

ಇಲ್ಲಿ ನಡೆಸಿದ ಸಂವಾದದಲ್ಲಿ ಕತೆಗೆ, ಕೃತಿ ರಚನೆಗೆ, ವರ್ಣನೆಗೆ , ಕಲ್ಪನೆಗೆ ಹೆಚ್ಚು ಅವಕಾಶ ನೀಡದೇ ಬದುಕಿನ ಅನೇಕ ಸಮಸ್ಯೆಗಳ  ಬಗ್ಗೆ ಮುಕ್ತವಾಗಿ  ಮಾತನಾಡುವ  ಸಂವಾದದ ಶೈಲಿಯು  ಹರಟೆ, ಸಂಭಾಷಣೆ, ಚರ್ಚೆ, ಪ್ರಶ್ನೋತ್ತರ, ಸಂದರ್ಶನ, ಸವಾಲು, ಇವೇ ಮೊದಲಾದವುಗಳು ಮಾತುಕತೆಯ ವಿವಿಧ ರೂಪಾಂತರಗಳು.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books