ರಾಷ್ಟ್ರಕವಿ ಎಂ. ಗೋವಿಂದ ಪೈ

Author : ಬಿ.ಎಸ್. ಸ್ವಾಮಿ

Pages 92

₹ 70.00




Year of Publication: 2018
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 23313400

Synopsys

‘ರಾಷ್ಟ್ರಕವಿ ಎಂ. ಗೋವಿಂದ ಪೈ’ ಸಿವಿಜಿ ಪಬ್ಲಿಕೇಷನ್ಸ್ ನ ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ರಾಷ್ಟ್ರಕವಿ ಎಂ. ಗೋವಿಂದಪೈಗಳು ಒಬ್ಬ ಮಹಾಪುರುಷ, ಕವಿ, ಕಲಾವಿದ, ನಾಟಕಕಾರ, ಗ್ರಂಥ ಕರ್ತೃ, ಪತ್ರ ಲೇಖಕರು, ಶಿಲಾಶಾಸನ ಸಂಶೋಧಕರು, ಅಪ್ರತಿಮ ಮೇಧಾಶಕ್ತಿಯುಳ್ಳವರು. ಸಾಹಿತ್ಯ ಶಕ್ತಿ, ಕಾವ್ಯಶಕ್ತಿ, ಗದ್ಯಶಕ್ತಿ ಹೇಳಲಸದಳ. ಐತಿಹಾಸಿಕ, ಖಗೋಳಶಾಸ್ತ್ರ, ಜ್ಯೋತಿಶ್ಯಾಸ್ತಗಳಲ್ಲಿ ಅಗಾಧ ಪಂಡಿತರು. ಭಾಷಾಜ್ಞಾನ ತಜ್ಞರು. ಆಳವಾದ ವಿಚಾರ ಶಕ್ತಿ ಅಪಾರವಾದ ಭಕ್ತಿ ಅವರಲ್ಲಿ ತುಂಬಿ ತುಳುಕಾಡುತ್ತಿತ್ತು. ಅಷ್ಟೇ ಅಲ್ಲ ಅವರು ಸರಳ ಜೀವಿ, ಭಾವ ಜೀವಿ ಹಾಗೂ ಉದಾರ ಮಿತ್ರರಾಗಿ ಮೆರೆದವರು, ಚಿಂತಕ, ಸಜ್ಜನ ಶಿರೋಮಣಿ, ಜೈನ, ಬೌದ್ಧ, ವೀರಶೈವ, ಸಾಹಿತ್ಯ ವಿಶಾರದ, ಸಂಗೀತ ಪ್ರಿಯರು, ಸಂಗೀತಜ್ಞರು, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಕನ್ನಡಿಗ ಹಾಗೂ ಭಾರತೀಯ. 

ಜಪಾನಿ, ಪಾಲಿ ಭಾಷಾ ಕೃತಿಗಳ ಅನುವಾದಕ, ಬಹುಭಾಷಾ ತಜ್ಞರು, ಬಂಗಾರದಂಥ ಮನಸ್ಸು, ಮಗುವಿನಂತೆ ಮುಗ್ಧತೆ, 'ಗೋವಿಂದ ಪೈಗಳು ಕನ್ನಡದ ಆಸ್ತಿ, ಜ್ಞಾನದೀಪ, ಜ್ಞಾಪಕ ದೀಪ, ಅದೆಲ್ಲಕ್ಕಿಂತ ಅವರಲ್ಲಿಯ ಮಾನವೀಯತೆ ನಿತ್ಯ ನೂತನವಾದುದು. ಒಂದಿಷ್ಟು ಆಡಂಬರವಿಲ್ಲ, ಕೃತಿಮತೆಯಿಲ್ಲ. ಅದೊಂದು ಪೂರ್ಣ ಕುಂಭ ಎನ್ನುತ್ತಾರೆ ದ.ಬ. ಕುಲಕರ್ಣಿ.  ಅಂಥಹ ಮಹಾನ್ ಸಾಧಕರ ಬಗ್ಗೆ ಮಕ್ಕಳಿಗೆ ತಿಳಿಸಲು ಈ ಕೃತಿಯನ್ನು ರಚಿಸಲಾಗಿದೆ.

About the Author

ಬಿ.ಎಸ್. ಸ್ವಾಮಿ
(08 September 1942)

ಕಥೆ, ಕಾದಂಬರಿ, ಕವನ, ನಾಟಕ, ಪ್ರಬಂಧ-ಹೀಗೆ ವೈವಿಧ್ಯಮಯ ಬರೆಹ ವ್ಯವಸಾಯದಿಂದ ಸಾಹಿತ್ಯ ಲೋಕದಲ್ಲಿ ಪರಿಚಿತರಾಗಿರುವ ಬಿ. ಸಿದ್ಧಲಿಂಗಸ್ವಾಮಿ (ಬಿ.ಎಸ್‌.ಸ್ವಾಮಿ) ಅವರು ಹುಟ್ಟಿದ್ದು 1942ರ ಸೆಪ್ಟಂಬರ್‌ 8 ರಂದು. ಊರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನ ಹಳ್ಳಿ. ತಂದೆ ವಿ. ಬಸವಲಿಂಗಪ್ಪನವರು ಪ್ರಾಥಮಿಕ ಶಾಲಾ ಶಿಕ್ಷಕರು, ತಾಯಿ ಶಿವನಾಗಮ್ಮ. ಪ್ರಾರಂಭಿಕ ಶಿಕ್ಷಣ ಮಧುವನಹಳ್ಳಿ, ಕೊಳ್ಳೇಗಾಲ. ಮೈಸೂರಿನ ಸೇಂಟ್‌ ಫಿಲೋಮಿನ ಕಾಲೇಜಿನಿಂದ ಬಿ.ಎಸ್ಸಿ. ಪದವಿ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ಮೈಸೂರು, ಚಾಮರಾಜನಗರ ಸುತ್ತಮುತ್ತಲ ಕಡೆಗಳಲ್ಲಿ ಹಬ್ಬಿರುವ ಪವಾಡ ಸದೃಶ ವಿಚಾರಗಳು, ಐತಿಹ್ಯ, ಜನರ ನಂಬಿಕೆ, ...

READ MORE

Related Books