ರವೀಂದ್ರಕಥಾಮಂಜರಿ (ಭಾಗ-3)

Author : ಅಹೋಬಲ ಶಂಕರ

Pages 479

₹ 100.00




Year of Publication: 2007
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಈ ಕೃತಿ ರವೀಂದ್ರ ಕಥಾಮಂಜರಿಯ ಮೂರನೆಯ ಸಂಪುಟವಾಗಿದೆ. ಒಂದು ನಾಟಕ ಹಾಗೂ 19 ಕಥೆಗಳನ್ನು ಈ ಸಂಪುಟವು ಒಳಗೊಂಡಿದೆ. ನಾವು ಮಾಡುವ ಪಾಪಗಳ ಅರಿವಿದ್ದೂ ಕೂಡ ಅವುಗಳನ್ನು ಮುಚ್ಚಿಟ್ಟು ಕೊಳ್ಳುವುದು ಡಾಂಭಿಕತನವಾದರೆ, ಅದನ್ನು ಬೇರೆಯವರಿಗೆ ಹೇಳಿ ಹೃದಯವನ್ನು ಹಗುರ ಮಾಡಿಕೊಳ್ಳುವುದು ಒಂದು ಸರಳ ವಿಧಾನವೆನಿಸುತ್ತದೆ. ಆದರೆ ಇಲ್ಲಿನ ಹೀನ ಕೃತ್ಯವೆಂದರೆ ಮಾನವೀಯತೆಯನ್ನು ಬೋಧಿಸುತ್ತಾ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು. ಇದು ಸಂಸ್ಕಾರದಲ್ಲಿ ಬಿಂಬಿತವಾಗಿದೆ. ಹೂತಿಟ್ಟ ಹಣದ ಆಸೆಯಿಂದ ಪಡುವ ಪರಿಪಾಟಲು, ಏಕಾಕಿತನ, ಇವುಗಳಿಂದಾಗಿ ಆ ಧನದ ಬಗೆಗೆ ನಿರಾಸಕ್ತಿಯನ್ನು ತಳೆದು ಸರಳಬದುಕನ್ನೇ ಆಯ್ದುಕೊಳ್ಳುವ ಮೃತ್ಯುಂಜಯ ಇಂತಹ ಕಥೆಗಳು ನಮ್ಮ ಬಾಳಿಗೆ ಬೆಳಕು ನೀಡುವ ಹಣತೆಗಳಾಗಿವೆ. ಇಂತಹ ಪ್ರಮುಖ ಮಹತ್ವದ ಕಥೆಗಳು ಸಂಪುಟದಲ್ಲಿದೆ.

About the Author

ಅಹೋಬಲ ಶಂಕರ
(15 May 1913)

ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅಹೋಬಲ ಶಂಕರ ಅವರು ಅತ್ಯುತ್ತಮ ಅನುವಾದಕರು. ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದ ಅವರು ಬರಹಗಾರ, ಪತ್ರಿಕೋದ್ಯಮಿ ಹಾಗೂ ಮಹಾನ್ ಸಾರ್ವಜನಿಕ ಸೇವೆಯಲ್ಲಿ ಆಸಕ್ತರಾಗಿದ್ದರು. ಬಂಗಾಳಿಯ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ನೇರವಾಗಿ ಅನುವಾದಿಸಿದ ಹಿರಿಮೆ ಅವರದು. ...

READ MORE

Related Books