ರಾಯಲಸೀಮಾ ಕಥೆಗಳು

Author : ಕುಂ. ವೀರಭದ್ರಪ್ಪ

Pages 197

₹ 144.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಬೆಂಗಳೂರು

Synopsys

ಖ್ಯಾತ ಕಥೆಗಾರ ಕುಂವೀ ಅವರ ಕಥೆಗಳ ಪರಿಸರ ಬಹುತೇಕವಾಗಿ ರಾಯಲಸೀಮಾದ್ದೇ ಆಗಿರುತ್ತದೆ. ಅಂಥದೆ ತೆಲುಗು ಕಥೆಗಳ ಕಟ್ಟು ಇದು. ತೆಲುಗು ಕಥೆಗಾರ ತುಮ್ಮಲ ರಾಮಕೃಷ್ಣ ಅವರ ಕಥೆಗಳನ್ನು ಕುಂವೀ ಅವರು ಅನುವಾದಿಸಿದ್ದಾರೆ. ರಾಯಲಸೀಮಾ ಕಥೆಗಳು ವಿಶೇಷವಾಗಿ ಒಂದಿಡೀ ಪ್ರಾದೇಶಿಕತೆಯನ್ನು ದಟ್ಟ ವಿವರಗಳೊಡನೆ ಕಟ್ಟಿಕೊಡುವ ಕಥನಗಳಾಗಿವೆ. ಕುಂವೀ ಅವರ ಕಥೆಗಾರಿಕೆಯ ತಾಕತ್ತಿನ ಅನುವಾದ ಇಲ್ಲಿ ಒಂದು ಗಾಢತೆಯನ್ನು ಒದಗಿಸಿದೆ.

About the Author

ಕುಂ. ವೀರಭದ್ರಪ್ಪ
(01 October 1953)

ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...

READ MORE

Related Books