ರೊಮ್ಯಾಂಟಿಸಿಜಮ್

Author : ಕೀರ್ತಿನಾಥ ಕುರ್ತಕೋಟಿ

Pages 96

₹ 30.00




Year of Publication: 2001
Published by: ಕರ್ನಾಟಕ ಸಾಹಿತ್ಯ ಅಕಾಡೆಮಿ
Address: ಕನ್ನಡ ಭವನ, ಜೆ. ಸಿ ರಸ್ತೆ, ಬೆಂಗಳೂರು - 560002

Synopsys

ಕನ್ನಡ ನವೋದಯ ಸಾಹಿತ್ಯದ ಮೇಲೆ ಇಂಗ್ಲಿಷ್ ರೊಮ್ಯಾಂಟಿಕ್ ಕಾವ್ಯದ ಪ್ರಭಾವ ಐತಿಹಾಸಿಕ ಸಂಗತಿಯಾಗಿದೆ. ರೊಮ್ಯಾಂಟಿಕ್ ಆಂದೋಲನದ ಹಿನ್ನೆಲೆಯನ್ನು ಚರ್ಚಿಸುತ್ತಾ ಜರ್ಮನ್ ಸಾಹಿತ್ಯದ ಪ್ರಭಾವ, ವ್ಯಕ್ತಿ ಮತ್ತು ಸಮಾಜಗಳ ನಡುವಿನ ಸಾಂಸ್ಕೃತಿಕ ಸಂಘರ್ಷಗಳನ್ನು ಕುರಿತು ’ನವ್ಯತೆ’ ಕೃತಿ  ಪ್ರಸ್ತಾಪಿಸುತ್ತದೆ. 

ಪ್ರತಿಭೆ ಮತ್ತು ಸಾಮುದಾಯಿಕ ಬುದ್ಧಿವಂತಿಕೆಯ ನಡುವೆ ಸಂಘರ್ಷ ಅನಿವಾರ್ಯವಾದ ಹಿನ್ನೆಲೆ, ಇವುಗಳ ಬಗ್ಗೆ, ವರ್ಡ್ಸ್ ವರ್ಥ್, ಮತ್ತು ಕೊಲ್ ರಿಜ್ ಕವಿಗಳ ಸಾಹಿತ್ಯ ರಚನೆ ಮತ್ತು ಪ್ರಭಾವ,  ಕವಿಪ್ರತಿಭೆ ಮತ್ತು ಸೃಜನಶಕ್ತಿಯ ಬಗ್ಗೆ ವಿವರಣೆ, ರೊಮ್ಯಾಂಟಿಸಿಜಮ್ ಸಾಹಿತ್ಯ ಶಕ್ತಿ ಮತ್ತು ದೌರ್ಬಲ್ಯಗಳ ಬಗ್ಗೆಇರುವ  ಅಂಶವನ್ನು ಸಾಹಿತ್ಯಿಕ ಹಿನ್ನೆಲೆಯಲ್ಲಿ ಕಂಡುಕೊಳ್ಳುವ ಮಾರ್ಗವಾಗಿ ನವ್ಯತೆ ಪರಿಚಯಿಸುತ್ತದೆ.

ಕನ್ನಡ ನವೋದಯ ಸಾಹಿತ್ಯದ ಮೇಲೆ ರೊಮ್ಯಾಂಟಿಸಿಜಮ್ ಸಾಹಿತ್ಯ ಪ್ರಭಾವ ಇವೆಲ್ಲವುಗಳ ದೀರ್ಘ ವಿವರಣೆ, ಮಾಹಿತಿಪೂರ್ಣ ಪರಾಮರ್ಶನ ಕೃತಿಯಾಗಿ ’ ನವ್ಯತೆ’ ಪುಸ್ತಕವನ್ನು ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರರಾದ ಕೀರ್ತಿನಾಥ ಕುರ್ತಕೋಟಿಯವರು ಹೊರತಂದಿದ್ದಾರೆ.

About the Author

ಕೀರ್ತಿನಾಥ ಕುರ್ತಕೋಟಿ
(12 October 1928)

ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ ಕೀರ್ತಿನಾಥ ಕುರ್ತಕೋಟಿ ಅವರು  12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ...

READ MORE

Related Books