ರೂವಾರಿ

Author : ಷ. ಶೆಟ್ಟರ್‌

Pages 318

₹ 350.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು -40
Phone: 9448804905

Synopsys

ಚರಿತ್ರೆ ಎಂದಿಗೂ ಉಳ್ಳವರ ಪರ ಎಂಬ ದೃಷ್ಟಿಕೋನವನ್ನು ಹೋಗಲಾಡಿಸುವ ಯತ್ನ ಕಳೆದ ಕಾಲು ಶತಮಾನದಿಂದ ನಡೆಯುತ್ತಿದೆ. ಅಂದರೆ ನಿರ್ಲಕ್ಷಿತರು ಅಥವಾ ಮೂಲೆಗುಂಪಾದವರ ಇತಿಹಾಸವನ್ನು ತಡಕುವ ಮಹತ್ವದ ಕೆಲಸ ಇದು. ಆ ಪ್ರಯತ್ನದ ಭಾಗವೆಂಬಂತೆ ರಚಿತವಾದ ಕೃತಿ ಹಿರಿಯ ಸಂಶೋಧಕ  ಷ. ಶೆಟ್ಟರ್ ಅವರು 2019ರಲ್ಲಿ ಹೊರತಂದಿರುವ ’ರೂವಾರಿ’.

ಶಿಲ್ಪವನ್ನು ಅಭ್ಯಸಿಸುವ ಜೊತೆಗೆ ಶಿಲ್ಪಿಯ ಕುರಿತೂ ಅರಿತುಕೊಳ್ಳುವ, ಲಿಪಿಯನ್ನು ಅರಿಯುವ ಜೊತೆಗೆ ಅದರ ಲಿಪಿಕಾರನನ್ನೂ ಗಮನಿಸುವ ಮಹತ್ವದ ವಿಚಾರವನ್ನು ಕೃತಿ ವಿವರಿಸುತ್ತದೆ. ಕಳಿಂಗ, ಕದಂಬ, ಬಾದಾಮಿ ಚಾಳುಕ್ಯರು, ರಾಷ್ಟ್ರಕೂಟರು, ತಲಕಾಡಿನ ಗಂಗರ ಕಾಲದಲ್ಲಿ ಇದ್ದ ಶಿಲ್ಪಿಗಳು, ಲಿಪಿಕಾರರ ಮಾಹಿತಿ ಕೃತಿಯಲ್ಲಿದೆ. ಒಟ್ಟು ಎಂಟು ಅಧ್ಯಾಯಗಳಲ್ಲಿ ಅಶೋಕನ ಕಾಲಾವಧಿಯಿಂದ ಸಣ್ಣಪುಟ್ಟ ಸಂಸ್ಥಾನಗಳಲ್ಲಿದ್ದ ಶಿಲ್ಪಿಗಳವರೆಗಿನ ಮಾಹಿತಿಯನ್ನು ಕೃತಿ ಒಳಗೊಂಡಿದೆ. ಇತಿಹಾಸಕಾರರು, ಸಂಶೋಧಕರು, ಕಲಾಸಕ್ತರು, ಕಲಾ ಇತಿಹಾಸದ ವಿದ್ಯಾರ್ಥಿಗಳು ಓದಲೇಬೇಕಾದ ಕೃತಿ ಇದು.

About the Author

ಷ. ಶೆಟ್ಟರ್‌
(11 December 1935)

ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...

READ MORE

Related Books