ರೊಟ್ಟಿ-ಬುತ್ತಿ

Author : ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

Pages 100

₹ 80.00




Year of Publication: 2008
Published by: ಶ್ರೀ ಶಿವಕುಮಾರ ಕಲಾಸಂಘ
Address: ಸಾಣೇಹಳ್ಳಿ

Synopsys

ಹಳ್ಳಿಯ ಹೊಲದಲ್ಲಿ ಕೆಲಸಕ್ಕೆ ಹೊತ್ತಾರೆ ಹೊರಟ ರೈತಾಪಿ ಜನ ಮಧ್ಯಾಹ್ನದ ಹಸಿವ ನೀಗಲು ಹೊತ್ತೊಯ್ಯುವುದೇ ರೊಟ್ಟಿ ಬುತ್ತಿ. ರೊಟ್ಟಿಬುತ್ತಿ ದೇಹದ ಆಯಾಸ ಕಳೆದರೆ, ಜ್ಞಾನ ಬುತ್ತಿ ಮನಸಿನ ಜಾಡ್ಯ ಕಳೆವುದು. 100 ಚಿಂತನಗಳ ಕೃತಿಯೆ ರೊಟ್ಟಿಬುತ್ತಿ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಈ ಕೃತಿ ನಿತ್ಯ ಜೀವನದ ಜಂಜಾಟಗಳಿಗೆ, ಬೇಸರ ದುಃಖ ದುಮ್ಮಾನಗಳಿಗೆ, ಜಗಳ ತಂಟೆ ತಾಪತ್ರಯಗಳಿಗೆ, ಆಸರ ಬೇಸರಗಳಿಗೆ, ಕೆಡುಕು ಒಡಕುಗಳಿಗೆ, ಆಸೆ ನಿರಾಸೆ, ಆಶಾಭಂಗಗಳಿಗೆ, ಕಸರು ಜಡ್ಡು ದರಿದ್ರ ದುರವಸ್ತೆಗಳಿಗೆ, ದುಷ್ಟ ಕಷ್ಟ ಕರುಬು ಕರ್ಮಗಳಿಗೆ, ಅವ್ಯವಸ್ತೆ ಅಸಂಸ್ಕಾರ ಆಲಸಿ ಅರಾಜಕ ಪೀಡನೆಗಳ ಬಗೆಗೆ ಕಾರಣಗಳ ಸಹಿತ ಪರಿಹಾರ ದಾರಿಯನ್ನು ತೋರಿಸುತ್ತದೆ. ಮಾರ್ಗದರ್ಶಿ ಸೂತ್ರಗಳು ಈ ಕೃತಿಯಲ್ಲಿದೆ. 

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಿರಿಗೆರೆ ಬೃಹನ್ಮಠದ ಶಾಖಾಮಠವಾದ ಸಾಣೇಹಳ್ಳಿಯ ಪೀಠಾಧ್ಯಕ್ಷರಾಗಿರುತ್ತಾರೆ. ನಿತ್ಯ ನಾನಾ ಆಧ್ಯಾತ್ಮಿಕ, ಶಿಕ್ಷಣಿಕ, ಸಾಮಾಜಿಕ ಮೌಲ್ಯ ನಿರ್ಮಾಣ, ರೈತಾಪಿ ಜನಜಾಗೃತಿ, ಮಾಧ್ಯಮ ಸಂವಹನ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರು ಸಿಗುವ ತುಸು ಬಿಡುವುಗಳ ಸಮಯದಲ್ಲಿ ಬೆಳಕಿನ ಕಿಡಿಯಂತ ಚಿಂತನ ಮಂಥನ ನಾಟಕ ವಚನ ಕೃತಿಗಳನ್ನ ರಚಿಸಿರುತ್ತಾರೆ. ಅನ್ನ ಆಶ್ರಯ ಅರಿವಿನ ದಾಸೋಹದ ಜೊತೆ ರಂಗ, ಗ್ರಂಥ ದಾಸೋಹವನ್ನು ಆಧ್ಯ ಕರ್ತವ್ಯಗಳೆಂಬಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ನಾಡಿನ ಪ್ರಗತಿಪರ ಚಿಂತಕರಲ್ಲಿ ಪ್ರಮುಖರಾದ ಸ್ವಾಮೀಜಿಯವರ ರೊಟ್ಟಿಬುತ್ತಿ ಕೃತಿ ನಮ್ಮಲ್ಲಿ ಪ್ರಜ್ಞೆಯ ವಿಸ್ತಾರಕ್ಕೆ ವಿಶಾಲ ಸೋಪಾನವನ್ನೊದಗಿಸುತ್ತದೆ.

 

About the Author

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಪರಿಸರ ರಕ್ಷಣೆ, ಪುಸ್ತಕ ಪ್ರೇಮ, ಸಾಹಿತ್ಯ ಕೃಷಿ, ರಂಗಚಟುವಟಿಕೆ, ವೈಚಾರಿಕ ಮುನ್ನೋಟಗಳಂತಹ ನಿರಂತರ ಆಸಕ್ತಿಯನ್ನು ಆಧ್ಯಾತ್ಮದ ಆಳದಲ್ಲಿ ಆಲೋಚಿಸುವ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಅವರು, 1951 ಸೆಪ್ಟಂಬರ್‌ 04 ರಂದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕು ಹೆಡಿಯಾಲ ಗ್ರಾಮದಲ್ಲಿ ಜನಿಸಿದರು. ತಂದೆ ನಾಗಯ್ಯ, ತಾಯಿ ಶಿವನಮ್ಮ. ಕನ್ನಡದ ದಿನ ಪತ್ರಿಕೆಗಳಿಗೆ ಲೇಖನ ಬರೆಯುತ್ತಲೆ ಪ್ರಜಾವಾಣಿಯ ಬಾಳಬುತ್ತಿಯ ಅಂಕಣಕಾರರಾಗಿದ್ದರು. 2004ರ ಹೊಸದುರ್ಗದಲ್ಲಿ ನಡೆದ ‘ಚಿತ್ರದುರ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನದ’ ಅಧ್ಯಕ್ಷತೆ ವಹಿಸಿದ್ದರು. ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ನಾಟಕೋತ್ಸವ ನಡೆಸಿದ್ದಾರೆ. 1998ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ‘ಗೌರವ ಫೆಲೋಷಿಪ್’, 2004ರಲ್ಲಿ ...

READ MORE

Related Books