ರುವಾರಿ

Author : ಷ. ಶೆಟ್ಟರ್‌

Pages 318

₹ 350.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905

Synopsys

ಜಕ್ಕಣ್ಣನ ಐತಿಹಾಸಿಕತೆ ಏನೇ ಇರಲಿ, ಬಹುತೇಕ ಶಿಲ್ಪಿಗಳು ‘ಆಚಾರ್ಯ’, ‘ಆಚಾರಿ’, ಮತ್ತು ‘ಓಜ’ ಎಂಬ ನಾಮಾಂತ್ಯವನ್ನು ಹೊಂದಿದ್ದರೆಂಬುದರಲ್ಲಿ ಅನುಮಾನವಿಲ್ಲ. ಪ್ರಾಕೃತ ಪದ ‘ಉಪಜ್ಝಾಯ’ ಸಂಸ್ಕೃತ ಪದ ‘ಉಪಾಧ್ಯಾಯ’ದಿಂದ ಬಂದ ಈ ‘ಓಜ’ ಪದದ ಅರ್ಥ ಮತ್ತು ‘ಆಚಾರ್ಯ’ ಪದದ ಅರ್ಥ ಒಂದೇ. ಅವು ‘ಅಧ್ಯಾಪಕ’, ‘ಗೌರವಾನ್ವಿತ’, ‘ಪೂಜಾರ್ಹ’ ಎಂಬುದನ್ನು ಸೂಚಿಸುವವು. ಈ ಜಗತ್ತನ್ನು ಸೃಷ್ಟಿಸಿದ ವಿಶ್ವಕರ್ಮನ(ಅಂದರೆ ಕೆಲವು ಗ್ರಂಥಗಳಲ್ಲಿ ಪ್ರತಿಪಾದಿಸಿರುವಂತೆ ಶಿವನ)ವಂಶವೆಂದೇ ಕಲಾಕಾರರೆಲ್ಲರೂ ಪ್ರತಿಪಾದಿಸಿಕೊಳ್ಳುವರು. ಶಿವ ‘ಪಂಚಾನನ’ ಅಥವಾ ಐದು ಮುಖದವನು (ಅವನ ಉಳಿದ ನಾಲ್ಕುಮುಖಗಳೆಂದರೆ ವಿಶ್ವಕರ್ಮ, ಮನು, ತ್ವಷ್ಟರ್, ಮತ್ತು ಮಯ) ಆದುದರಿಂದ ಅವನ ವಂಶಜರು ಪಾಂಚಾಳರೆಂದು ಪ್ರಸಿದ್ಧರಾದರು. ಶಿಲ್ಪವನ್ನೊಳಗೊಂಡ ಪಂಚಕಲೆಗಳಲ್ಲಿ ಇವರು ನಿಷ್ಣಾತರೆನಿಸಿದರು. ಮೂರ್ತಿಗಳನ್ನು ರೂಪಿಸುವುದರಲ್ಲಿ ಪರಿಣತಿ ಪಡೆದ ಇವರನ್ನು ‘ರೂಪಕಾರ’ ಎಂದೇ ಗುರುತಿಸಲಾಗಿದೆ. ಈ ಪದವೇ ‘ರೂವಾರಿ’ ಎಂದು ಮಾರ್ಪಾಟುಗೊಂಡಿತು. ಹಲವಾರು ಚಾಳುಕ್ಯ, ಹೊಯ್ಸಳ ಶಿಲ್ಪಿಗಳು ‘ಆಚಾರ್ಯ’, ‘ಆಚಾರಿ’, ‘ಓಜ’ ನಾಮಾಂತ್ಯಗಳನ್ನು ಹೊಂದಿರುವುದನ್ನು ನೋಡಬಹುದು.

About the Author

ಷ. ಶೆಟ್ಟರ್‌
(11 December 1935)

ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...

READ MORE

Related Books