ಎಸ್.ವಿ.ರಂಗಣ್ಣ

Author : ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)

Pages 104

₹ 60.00




Year of Publication: 2008
Published by: ನವಕರ್ನಾಟಕ ಪ್ರಕಾಶನ
Address: ನವಕರ್ನಾಟಕ ಪಬ್ಲಿಕೇಷನ್ಸ್‌ (ಪ್ರೈ.) ಲಿ. ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022203580/01

Synopsys

ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸ ದಾರಿ ತೋರಿದವರು ಎಸ್.ವಿ.ರಂಗಣ್ಣ. ಕುಮಾರವ್ಯಾಸ ಕಿರುಹೊತ್ತಗೆ. ರುಚಿ, ವಿಡಂಬನೆ, ಶೈಲಿ ಪ್ರಾರಂಭದ ಕೃತಿಗಳು. ಶೈಲಿ ಕೃತಿಯು ಇವರಿಗೆ ಅಪಾರ ಕೀರ್ತಿ ತಂದಿತು. ಪಂಪ, ರನ್ನ, ಜನ್ನ, ನಾಗಚಂದ್ರ, ಹರಿಹರ, ಲಕ್ಷ್ಮೀಶ ಮುಂತಾದ ಅನೇಕ ಕವಿಗಳ ಶೈಲಿಯನ್ನು ‘ಶೈಲಿ’ ಕೃತಿಯಲ್ಲಿ ಚರ್ಚಿಸಿದ್ದಾರೆ. ವಿಮರ್ಶಾ ಸಂಕಲನ-ಹೊನ್ನಶೂಲ 1969ರಲ್ಲಿ ಪ್ರಕಟಿತ. ಕಾಳಿದಾಸನ ‘ನಾಟಕ ವಿಮರ್ಶೆ’ ಮತ್ತೊಂದು ಪ್ರಮುಖ ಕೃತಿ. ಪಾತ್ರಚಿತ್ರಣ, ಸಂವಿಧಾನ, ನಾಟಕೀಯತೆ ಕಥಾವಸ್ತುಗಳ ದೀರ್ಘಚರ್ಚೆ. ದೀರ್ಘ ವ್ಯಾಸಂಗ ಹಾಗೂ ಪರಿಶ್ರಮದಿಂದ ರಚಿಸಿದ ಮತ್ತೊಂದು ಮಹೋನ್ನತ ಕೃತಿ “ಪಾಶ್ಚಾತ್ಯ ಗಂಭೀರ ನಾಟಕಗಳು”. ರಂಗಬಿನ್ನಪ ಮುಕ್ತಕಗಳ ಸೃಜನಾತ್ಮಕ ಕೃತಿ. ಇನ್ನೆರಡು ಕೃತಿ ನಾಟುನುಡಿ. ಕವಿಕಥಾಮೃತ-ವಿದೇಶಿ ಬರಹಗಾರರ ಬದುಕಿನ ರೋಚಕ ಘಟನೆಗಳ ಸರಮಾಲೆ. ಇಂಗ್ಲಿಷ್ ಕೃತಿಗಳು-KNOTS AND KNOTTING, THE LADY AND THE RING, OLD TALE RETOLD, B.M. SRIKANTAIAH : A PROFILE. ಸಂದ ಗೌರವ ಪ್ರಶಸ್ತಿಗಳು-ಸ್ಕೌಟ್ ಚಳವಳಿಯಲ್ಲಿ ತೊಡಗಿಸಿಕೊಂಡದ್ದಕ್ಕೆ ರಜತಗಜ ಪ್ರಶಸ್ತಿ, ರಂಗಬಿನ್ನಪ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, 1970ರಲ್ಲಿ ಮೈಸೂರು ವಿ.ವಿ.ದಿಂದ ಗೌರವ ಡಿ.ಲಿಟ್ ಪದವಿ. 1976ರಲ್ಲಿ ಶಿವಮೊಗ್ಗೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ಅಭಿಮಾನಿಗಳು ಅರ್ಪಿಸಿದ ಗೌರವ ಗ್ರಂಥ ‘ಬಾಗಿನ’. ಈ ವಿಮರ್ಶಕರ ಬಗ್ಗೆ ಸಿ.ಪಿ.ಕೆ ಅವರು ಬರೆದಿದ್ದಾರೆ.

About the Author

ಸಿ.ಪಿ.ಕೆ. (ಸಿ.ಪಿ. ಕೃಷ್ಣಕುಮಾರ್)
(08 April 1939)

ಲೇಖಕರು, ಸಂಶೋಧಕರು ಆದ ಸಿ.ಪಿ.ಕೃಷ್ಣಕುಮಾರ್ ಅವರು 08-04-1939ರಂದು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರ ತಾಲೂಕಿನ ಚಿಕ್ಕನಾಯಕನ ಹಳ್ಳಿಯಲ್ಲಿ ಜನಿಸಿದರು. ತಂದೆ ಪುಟ್ಟೇಗೌಡರು ಮೋಜಿಣಿದಾರರಾಗಿ ಸರಕಾರಿ ಕೆಲಸದಲ್ಲಿದ್ದರು. ಕೃಷ್ಣಕುಮಾರ್ ಅವರು 9 ತಿಂಗಳ ಮಗುವಾಗಿದ್ದಾಗಲೇ ತಾಯಿ ತೀರಿಕೊಂಡರು.  ಸಿಪಿಕೆ ಎಂದೇ ಪ್ರಸಿದ್ಧರಾದ ಅವರು ಜೆ.ಎಸ್.ಎಸ್. ಮಹಾರಾಜಾ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನು ಪಡೆದರು. 1961 ರಲ್ಲಿ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ ಪಡೆದರು.  1962ರಲ್ಲಿ ಸಿ.ಪಿ.ಕೆ. ಅವರ ಮದುವೆ ಶಾರದಾ ಅವರ ಜೊತೆಗೆ ಜರುಗಿತು. 1964ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾದರು.1967ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅಧ್ಯಾಪಕರಾದರು. 1969ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ...

READ MORE

Related Books