ಸಾಗರ್ ಔರ್ ಬಾರಿಶ್

Author : ಗಿರೀಶ ಜಕಾಪುರೆ

Pages 120

₹ 150.00




Year of Publication: 2015
Published by: ಸೃಷ್ಠಿ ಪ್ರಕಾಶನ
Address: # 550, 2ನೇ ಮೇನ್, ಜೆ.ಪಿ. ನಗರ, ಬೆಂಗಳೂರು-78
Phone: 9860838605

Synopsys

ಕನ್ನಡ ಜೀವಭಾವದ ಕವಿ ನಾಗತಿಹಳ್ಳಿ ರಮೇಶ ಅವರ ಕನಸಂಕಲನ ‘ಸಮುದ್ರ ಮತ್ತು ಮಳೆ’ಯ ಹಿಂದಿ ಅನುವಾದವೇ ‘ಸಾಗರ್ ಔರ್ ಬಾರಿಶ್’. ನೆಲಮೂಲದ ಕವಿತೆಗಳನ್ನು ಕನ್ನಡದಿಂದ ಹಿಂದೀಭಾಷೆಗೆ ಅಷ್ಟೇ ಸಮರ್ಥವಾಗಿ ಅನುವಾದಿಸಲಾಗಿದೆ. ಇಲ್ಲಿಯ ಕವಿತೆಗಳು ತಾಯಿ, ಮಮತೆ, ಕರುಣೆ, ಪ್ರೀತಿ, ನೆಲ, ಜಲ, ಸಂಬಂಧಗಳ ಕುರಿತಾಗಿದ್ದು ಈ ಕೃತಿಯ ಓದು ಒಂದು ಭಾವಯಾನದಂತೆ. ಈ ಕೃತಿಯ ಕೇಂದ್ರವಸ್ತು ತಾಯಿ. ಇಲ್ಲಿಯ ಎಲ್ಲ ಕವಿತೆಗಳಲ್ಲಿ ತಾಯಿ, ಅವಳ ಪ್ರೀತಿ, ತ್ಯಾಗ, ಕರುಣೆ ಇದ್ದೇ ಇದೆ. ಅಲ್ಲದೇ, ಈ ಕವಿತೆಗಳಲ್ಲಿ ಬುದ್ಧ, ಅಲ್ಲಮ, ಬಸವ, ಜಿಬ್ರಾನ್, ಚಾರ್ಲಿ, ದೇವನೂರು ಸೇರಿದಂತೆ ಹಲವಾರು ಗಣ್ಯರು ಕಣ್ಣೆದುರಿಗೆ ಬರುತ್ತಾರೆ. ತುಂಬ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಮುದ್ರಣವೂ ಈ ಕೃತಿಯನ್ನು ಇನ್ನಷ್ಟು ಮೌಲ್ಯಯುತವಾಗಿಸಿದೆ. ಉಸ್ಮನಾಬಾದ ವಿವಿಯ ಡಾ. ವೇದಕುಮಾರ ವೇದಾಲಂಕಾರ ಅವರ ಮುನ್ನುಡಿ ಮತ್ತು ಡಿ. ಆರ್. ತುಕಾರಾಂ ಅವರ ಮೆಚ್ಚುಗೆಯ ಮಾತುಗಳು ಈ ಕೃತಿಗೆ ಲಭಿಸಿವೆ.

 

 

About the Author

ಗಿರೀಶ ಜಕಾಪುರೆ
(09 September 1981)

ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ‌ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...

READ MORE

Related Books