ಸಾಹಿತ್ಯ ಸಂಜೀವಿನಿ

Author : ಆದ್ಯ ರಾಮಾಚಾರ್

Pages 234

₹ 50.00




Year of Publication: 1997
Published by: ವರದರಾಜ ಪ್ರಕಾಶನ
Address: ಭೀಮರಥಿ,, 114-Y, 4ನೇ ಮುಖ್ಯ ರಸ್ತೆ, 4ನೇ ಹಂತ, 7ನೇ ಬ್ಲಾಕ್, ಬನಶಂಕರಿ 3ನೇ ಹಂತ, ಬೆಂಗಳೂರು-560085
Phone: 0806692139

Synopsys

ಭಾರತೀಯ ಸಂಸ್ಕೃತಿ ಕುರಿತು ಆದ್ಯ ರಾಮಾಚಾರ್ಯರು ಬರೆದ ಕೃತಿ-ಸಾಹಿತ್ಯ ಸಂಜೀವಿನಿ. ಈ ಕೃತಿಯಲ್ಲಿ ನರಸಿಂಹಾವತಾರದ ಮೂಲಸ್ಥಾನ, ಪಶ್ಚಿಮಾಭಿಮುಖವಾಗಿ ನಿಂತ ವಾಯುಪುತ್ರನ ಅಂತಃಕರಣ, ಆಂಜನೇಯ ವಿಲಾಸ, ಆಂಜನೇಯನ ಭಕ್ತ ಔರಂಗಜೇಬ, ಯಕ್ಷನಗರಿ ತಂಜಾವೂರು, ದಾಸ ವಿಶ್ರಾಮಧಾಮ, ಶ್ರೀ ರಘುತ್ತಮ ತೀರ್ಥರು, ವಿರಾಟ ರೂಪಿ ಕುರುಕ್ಷೇತ್ರ, ತಂಜಾವೂರಿನ ಜ್ಞಾನಗಂಗೋತ್ರಿ, ಯೋಗಿ ಕೃಷ್ಣಪ್ರೇಮ ಹೀಗೆ ವಿವಿಧ ಅಧ್ಯಾಯಗಳಡಿ ಭಾರತೀಯ ಸಂಸ್ಕೃತಿಯನ್ನು ಅನಾವರಣಗೊಳಿಸಲು ಲೇಖಕರು ಯತ್ನಿಸಿದ್ದಾರೆ.

 

About the Author

ಆದ್ಯ ರಾಮಾಚಾರ್
(14 November 1924 - 04 December 2010)

ಹಿರಿಯ ಲೇಖಕ ಆದ್ಯ ರಾಮಾಚಾರ್ಯರು ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣದಲ್ಲಿ. ತಂದೆ-ಸೇತುರಾಮಾ ಚಾರ್‌ ಆದ್ಯ, ತಾಯಿ-ಕಾಶೀಬಾಯಿ. ಪ್ರಾರಂಭಿಕ ಶಿಕ್ಷಣ ಲಚ್ಯಾಣ ಮತ್ತು ಭುಯ್ಯಾರ ಶಾಲೆಗಳಲ್ಲಿ ಪಡೆದ ಅವರು ಮಾಧ್ಯಮಿಕ ಶಿಕ್ಷಣ ಬಿಜಾಪುರದ ದರ್ಬಾರ ಹೈಸ್ಕೂಲಿನಲ್ಲಿ ಪಡೆದರು. ಸ್ವಾತಂತ್ರ್ಯ ಚಳವಳಿಯಿಂದ ಪ್ರೇರಿತರಾಗಿದ್ದ ಅವರು ಹಲವು ಚಳವಳಿಯಲ್ಲಿ ಭಾಗಿಯಾಗಿ ವಿದ್ಯಾಭ್ಯಾಸವನ್ನು ನಿಲ್ಲಿಸಿದರು. ನಂತರ ಬಿಜಾಪುರದಲ್ಲಿ ಫ. ಗು. ಹಳಕಟ್ಟಿಯವರ ಮುದ್ರಣಾಲಯದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು ಆನಂತರ ಮೈಸೂರಿನ ‘ಉಷಾ ಸಾಹಿತ್ಯ ಮಾಲೆ’ಯಲ್ಲಿ ಉದ್ಯೋಗಕ್ಕೆ ಸೇರಿದರು. ಆನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಲಸಕ್ಕೆ ಸೇರಿದರು. ಈ ಸಂದರ್ಭದಲ್ಲಿ ...

READ MORE

Related Books