ಸಾಹಿತ್ಯ ಸುಷಮೆ

Author : ಶತಾವಧಾನಿ ಆರ್. ಗಣೇಶ

Pages 180

₹ 195.00




Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಹುಬ್ಬಳ್ಳಿ-580020

Synopsys

ಖ್ಯಾತ ವಿದ್ವಾಂಸ ಡಾ. ಶತಾವಧಾನಿ ಆರ್. ಗಣೇಶ್ ಅವರ ಕೃತಿ-ಸಾಹಿತ್ಯ ಸುಷಮೆ. ವ್ಯಾಸ-ವಾಲ್ಮೀಕಿ, ಕಾಳಿದಾಸ, ಜಯದೇವ, ಅಮರುಕ, ಮಂಕುತಿಮ್ಮನ ಕಗ್ಗ ಹಾಗೂ ಮಿಲ್ಟನ್ ಸಾಹಿತ್ಯದ ವೈಶಿಷ್ಟ್ಯವನ್ನು ಚರ್ಚಿಸಲಾಗಿದೆ. ಹೊಸ ನೋಟದಿಂದ ಚರ್ಚಿಸಲಾಗಿದೆ. ಶೃಂಗಾರ ಹಾಗೂ ಹಾಸ್ಯರಸಗಳ ಪ್ರಸ್ತಾಪವೂ ಇಲ್ಲಿದೆ. ಮಂಕುತಿಮ್ಮನ ಕಗ್ಗದ ಮಹತ್ವವನ್ನೂ ತಿಳಿ ಹೇಳಲಾಗಿದೆ. ಪಾಶ್ಚಾತ್ಯ ಕವಿ ಮಿಲ್ಟನ್ ಸಾಹಿತ್ಯದ ವಿಮರ್ಶೆಯೂ ಇದೆ. ಹೀಗೆ ಒಟ್ಟು 10 ಲೇಖನಗಳ ಸಂಗ್ರಹವಿದು. ಶಾಸ್ತ್ರೀಯ ಎನ್ನಬಹುದಾಧ ಸಾಹಿತ್ಯ ಕೃತಿಗಳನ್ನು ಎತ್ತಿಕೊಂಡು ಮಾಡಿರುವ ವಿಮರ್ಶೆಯು ಓದುಗರಿಗೂ, ವಿಮರ್ಶಕರಿಗೂ ಉತ್ತಮ ಮಾದರಿ ಕೃತಿ ಇದು.

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books