ಸಾಕ್ಷಿಗುಡ್ಡ

Author : ಪೂರೀಗಾಲಿ ಮರಡೇಶಮೂರ್ತಿ

Pages 200

₹ 150.00




Year of Publication: 2018
Published by: ಲಿಖಿತ ಸ್ವರೂಪ್ ಪಬ್ಲಿಕೇಶನ್ಸ್
Address: ನಂ.06, 2ನೇ ಮಹಡಿ, ಅಲ್ಲಮಪ್ರಭು ಕಾಂಪ್ಲೇಕ್ಸ್, ವೀರಶೈವ ಅನಾಥಾಲಯ, 5ನೇ ಕ್ರಾಸ್, ರಾಮಾನುಜ ರಸ್ತೆ, ಮೈಸೂರು-570004.
Phone: 9449526390

Synopsys

ಸಾಹಿತಿ ಪೂರೀಗಾಲಿ ಮರಡೇಶ ಮೂರ್ತಿ ಅವರು ಸಕ್ಕರೆ ಜಿಲ್ಲೆಯ ಗ್ರಾಮೀಣ ಪರಿಸರದಲ್ಲಿ ಜನಿಸಿದವರು. `ಸಾಕ್ಷಿಗುಡ್ಡ’ದ ಕಥೆಗಳು ಹಳ್ಳಿಪ್ರೀತಿಯ ಬದುಕಿನ ನೂರಾರು, ಸಾಕ್ಷಿಗಳನ್ನು ಸಾಂಕೇತಿಕವಾಗಿ ದಾಖಲಿಸಿವೆ. `ದ್ವಾಸಿ ಕೊಡ್ರಿ ದ್ವಾಸಿ’ ಕಥೆಯಲ್ಲಿ ಒಂದು ಸ್ನಿಗ್ಧಹಳ್ಳಿ ಚಿತ್ರಣವಿದೆ. `ದ್ಯಾವ್ರಕಥೆ’ಯು ನಾಗಾಲೋಟದ ಬದುಕಿನ ಆಯಾಮದೊಳಗೆ ತಂತಾನೆ ಬಿಚ್ಚಿಕೊಳ್ಳುತ್ತದೆ. `ಅಪ್ಪನ ಪ್ರೀತಿಯ ಅಂಗಿ’ ಕಥೆ ತನ್ನದೇ ಸಂಕೀರ್ಣತೆಯಲ್ಲಿ ಮೂಡಿ ಬಂದಿದ್ದರೂ ಸಹ ಬಾಂಧವ್ಯದ ತಂಗುದಾಣವಾಗುತ್ತದೆ. `ಕಥೆ ಹುಡುಕುತ್ತಾ’ ಕಥೆಯು ಬದುಕನ್ನು ಯಥಾವತ್ತು ತೆರೆದಿಡುವ ಒಂದು ಪ್ರೀತಿ ಮತ್ತು ಕಾಮದ ಕಥೆ. `ಬೆಟ್ಟದ ಹುಡುಗಿ’..... ಹೀಗೂ ಇರ್ತಾರಾ? ಎನ್ನುವ ಕೌತುಕದೊಂದಿಗೆ ಆರಂಭವಾಗುತ್ತದೆ. `ಇದು ಯಾರ ಹೊಲ’ ಗ್ರಾಮ್ಯ ಕಥಾ ಹಂದರ ಹೊತ್ತು ಸಾಗಿದರೂ ಹಳ್ಳಿ ಮನಸ್ಸುಗಳ ಪ್ರೀತಿಯನ್ನು ತೋರಿಸುತ್ತದೆ. `ಅವಳ ಸ್ವಗತ’ ಒಂದು ಹೆಣ್ಣಿನ ಆರ್ತಕಥನ! ಅವಳ ಒಳತೋಟಿಯ ನೋವುಗಳನ್ನು ಹೇಳಿಕೊಳ್ಳುವ ಒಂದು ಆತ್ಮಕಥನವಾಗಿ ತೆರೆದುಕೊಂಡಿದೆ. ಇನ್ನು `ಸಿದ್ಲಿಂಗಿ ಕಥೆ’ಯು ಒಬ್ಬ ಗಂಡುಬೀರಿ ಹುಡುಗಿಯೊಬ್ಬಳೊಳಗೆ ಅದೆಂತಹ ಜಾತ್ಯತೀತ ಭಾವನೆಗಳಿವೆ. `ಕಾಬ್ಲರ್ ನ ಭೂಮಿ’ ಕಥೆ ಒಬ್ಬ ಚಮ್ಮಾರನ ಭೂಮಿ ಕಥೆ.

About the Author

ಪೂರೀಗಾಲಿ ಮರಡೇಶಮೂರ್ತಿ
(06 June 1966)

ಕವಿ, ಕಾದಂಬರಿಕಾರ ಪೂರೀಗಾಲಿ ಮರಡೇಶಮೂರ್ತಿ ಅವರು ಮೂಲತಃ ಮಂಡ್ಯದವರು. ವಚನ ಸಾಹಿತ್ಯದಲ್ಲಿ ತಮ್ಮೊಳಗಿನ ಅರಿವನ್ನು ಅಭಿವ್ಯಕ್ತಿಸಿದ್ದಾರೆ. ಕನ್ನಡ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. ’ಸಿಂಧೂರ ಬಿಂದು’ ಅವರ ಮೊದಲ ಕಾದಂಬರಿ. ಸುಮಾರು  3 ದಶಕಗಳ ಕಾಲ ಸಾಹಿತ್ಯ ಕೈಂಕರ್ಯ ನಡೆಸಿರುವ ಇವರು 50 ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಮೈಸೂರು ರತ್ನ ಸಾಂಸ್ಕೃತಿಕ ಪ್ರತಿಷ್ಠಾನದಡಿ 25 ವರ್ಷಗಳಿಂದ ಯುವಪೀಳಿಗೆಗೆ ಸಾಹಿತ್ಯ ಕಾರ್ಯಕ್ರಮಗಳನ್ನು ವೈಚಾರಿಕ ನೆಲೆಗಟ್ಟಿನಲ್ಲಿ ನಡೆಸುತ್ತಾ ಬಂದಿದ್ದಾರೆ. ’ನೀಲಿಬಾನಿನ ತಾರೆಗಳು, ಹನಿಗಳು, ಕಾವ್ಯಕನ್ನಿಕೆ’ ಅವರ ಪ್ರಮುಖ ಕವನ ಸಂಕಲನಗಳು. ’ಒಲವಿನ ಕನಸು, ಅವಳು ಭೂಮಿಕೆ, ಸುಳಿ, ಸೂರ್ಯ ...

READ MORE

Related Books