ಸಾಮ್ಯವಾದ

Author : ಬುರ್ಲಿ ಬಿಂದುಮಾಧವ (ಆಚಾರ್ಯ)

Pages 174

₹ 1.00




Year of Publication: 1938
Published by: ಮಿಂಚಿನ ಬಳ್ಳಿ ಪ್ರಕಾಶನ
Address: ಧಾರವಾಡ

Synopsys

ಕುಲಕರ್ಣಿ ರಾಮಚಂದ್ರರಾಯರು ಹಾಗೂ ಬುರ್ಲಿ ಬಿಂದುಮಾಧವ ಆಚಾರ್ಯರು ಬರೆದ ಕೃತಿ-ಸಾಮ್ಯವಾದ. ಈ ಸಾಮ್ಯವಾದದಲ್ಲೂ ಕ್ರಾಂತಿಕಾರಕ ವಿಚಾರಗಳಿವೆ. ನಮ್ಮ ನೆಲಕ್ಕೆ ಒಗ್ಗಿಕೊಳ್ಳದಿದ್ದರೂ ಕಾಲಕ್ಕೆ ಆಗುವ ಬದಲಾವಣೆಗೆ ಹೊಂದಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ, ಬಂಡವಲವಾದದ ಹುಟ್ಟು, ಬಂಡವಲವಾದದ ಭೂತಚೇಷ್ಟೆಗಳು, ಬಂಡವಲವಾದದ ದೋಷ ಎಲ್ಲಿದೆ? ಸಾಮ್ಯವಾದದ ಸಿದ್ಧಾಂತ, ಭಾರತೀಯ ಸಾಮ್ಯವಾದ, ಸಾಮ್ಯವಾದದ ಪರಿಣಾಮಗಳು, ಸಾಮ್ಯವಾದದ ಶತ್ರುಗಳು, ಭಾರತವೂ ಸಾಮ್ಯವಾದವೂ ಹೀಗೆ ಒಟ್ಟು 13 ಅಧ್ಯಾಯಗಳಲ್ಲಿ ಸಾಮ್ಯವಾದದ ಸಮಗ್ರ ಚಿತ್ರಣ ನೀಡಲಾಗಿದೆ. ಸಾಮ್ಯವಾದದ ವಿಚಾರಗಳನ್ನೆಲ್ಲ ಕನ್ನಡಿಗರ ಮುಂದಿಡುವುದೇ ಈ ಬರವಣಿಗೆಯ ಉದ್ದೇಶ ಎಂದು ಮುನ್ನುಡಿಯಲ್ಲಿ ಲೇಖಕರು ಸ್ಪಷ್ಟಪಡಿಸಿದ್ದಾರೆ.

About the Author

ಬುರ್ಲಿ ಬಿಂದುಮಾಧವ (ಆಚಾರ್ಯ)
(18 August 1899 - 27 October 1981)

ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು.  ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...

READ MORE

Related Books