ಸಾಗರ ಸೃಷ್ಟಿ

Author : ಸಂತೋಷ ಕುಮಾರ .ಟಿ. ಹೆಚ್

Pages 119

₹ 150.00




Year of Publication: 2022
Published by: ಮಲೆನಾಡು ಪ್ರಕಾಶಕರು
Address: ಶಿವವೊಗ್ಗ ಜಿಲ್ಲೆ,ಸಾಗರ ತಾಲ್ಲೂಕು, ಕರ್ಕಿಕೊಪ್ಪ ಸಾಗರ

Synopsys

'ಸಾಗರಸೃಷ್ಟಿಯ ಮೂಲಕ ತಮ್ಮ ಭಾವನೆಗಳ ಹಾಗು ಕಲ್ಪನೆಯ ಸಾಗರವನ್ನೇ ಓದುಗರಿಗೆ ನೀಡಿದ್ದಾರೆ. ಈ ಕಥಾ ಸಂಕಲನವು ಸಂತೋಷ ಕುಮಾರರ ಪರಿಶ್ರಮ, ಕಾಳಜಿ, ಸಾಧನೆಯ ಪ್ರತೀಕವಾಗಿದೆ. ಪ್ರತಿಯೊಂದು ಕಥೆಯ ವಸ್ತು, ಜೀವನದ ಮಜಲುಗಳಿಗೆ ಬಹಳ ಸಮೀಪವಾಗಿದೆ. 'ಹುಲಿ ಹೊಡೆದದ್ದು' ಕಥೆಯು ಓದುಗನನ್ನು ಕಾಡಿಗೆ ಸ್ವತಃ ಕರೆದುಕೊಂಡು ಹೋಗುವಲ್ಲಿ ಸಂಶಯವೇ ಇಲ್ಲ. 'ಶ್ವೇತಾಂಬರ- ಪೀತಾಂಬರ' ಕಥೆಯು ಈ ಪ್ರಪಂಚದಲ್ಲಿ ಮೋಸಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ನಾಣ್ಣುಡಿಗೆ ಸನಿಹವಾಗಿದೆ. ಅದೇ ರೀತಿ 'ಆರಕ್ಷಕ' ಕಥೆಯ ಕಥಾವಸ್ತು ಓದುಗನನ್ನು ಕುತೂಹಲ ಘಟ್ಟಕ್ಕೆ ಕರೆದುಕೊಂಡು ಹೋಗುವುದರಲ್ಲಿ ಅತಿಶಯೋಕ್ತಿಯಿಲ್ಲ. ಒಟ್ಟಿನಲ್ಲಿ 'ಸಾಗರ ಸೃಷ್ಟಿ' ಕಥಾ ಸಂಕಲನವು ಓದುಗರಿಗೆ ಮುಕ್ತವಾಗಿದೆ. ಬರವಣಿಗೆಯ ಶೈಲಿ ಸರಳವಾಗಿದೆ. ಸನ್ನಿವೇಶಗಳ ಕಲ್ಪನೆ, ಚಿತ್ರಣಗಳನ್ನು ಬರಹ ರೂಪದಲ್ಲಿ ಭಟ್ಟಿ ಇಳಿಸಿರುವುದು ನಿಜಕ್ಕೂ ಶ್ಲಾಘನೀಯ. 'ಸಾಗರಸೃಷ್ಟಿ' ಕಥಾಸಂಕಲನವು ಸಾಗರದಷ್ಟು ಅಗಾಧವಾದ ಓದುಗಬಳಗವನ್ನು ತಲುಪಲಿ ಎನ್ನುತ್ತಾರೆ ನ್ಯಾಯವಾದಿ ಬಿ.ಆರ್. ಪಲ್ಲವಿ.

About the Author

ಸಂತೋಷ ಕುಮಾರ .ಟಿ. ಹೆಚ್
(08 April 1982)

ಸಂತೋಷ ಕುಮಾರ ಟಿ ಹೆಚ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕರೂರು ಹೋಬಳಿಯ ತೇಕಲೆ ಎನ್ನುವ ಹಳ್ಳಿಯಲ್ಲಿ 1982 ಎಪ್ರಿಲ್ 8 ರಂದು ಜನಿಸಿದರು. ಹಾಲಪ್ಪ ಕೆ ಟಿ ಮತ್ತು ಪುಟ್ಟಮ್ಮ ಇವರ ದ್ವಿತೀಯ ಪುತ್ರರಾದ ಇವರು ತುಮರಿಯಲ್ಲಿ ಪ್ರೌಢ ಶಿಕ್ಷಣ ಪಡೆದು ಸಾಗರದ ಎಲ್ ಬಿ ಕಾಲೇಜಿನಲ್ಲಿ ಪದವಿಯನ್ನು ಪಡೆದರು. ಪ್ರಸ್ತುತ್ತ ಸಾಗರದ ಪ್ರದಾನ ವ್ಯವಹಾರ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೃತಿಗಳು : ಆಗಸದ ಸಂತಸ, ಸಾಗರ ಸೃಷ್ಟಿ ...

READ MORE

Related Books