ಸಗರನಾಡಿನ ಮಾಣಿಕ್ಯ

Author : ಪ. ಮಾನು ಸಗರ

Pages 120

₹ 110.00




Year of Publication: 2018
Published by: ಸಗರ ಪ್ರಕಾಶನ
Address: 33, ಶ್ರೀ ಸಿದ್ದೇಶ್ವರ ನಿಲಯ, 4ನೇ ಅಡ್ಡರಸ್ತೆ, ದೇವನಗರ, ಹಳೆ ಜೇವರ್ಗಿ ರಸ್ತೆ ಕಲಬುರಗಿ-585 102
Phone: 9448214003

Synopsys

ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ವಲಯದಲ್ಲಿ ಪ್ರೊ.ಸೂಗಯ್ಯ ಹಿರೇಮಠ ಅವರ ಹೆಸರು ಚಿರಪರಿಚಿತ. ಹತ್ತು ಹಲವು ಕೃತಿಗಳನ್ನು ಬರೆದ ಜಾನಪದ ತಜ್ಞ ಪ್ರೊ. ಸೂಗಯ್ಯ ಹಿರೇಮಠ, ಅನಿರೀಕ್ಷಿತವಾಗಿ ಮರೆಯಾದಾಗ ಆತ್ಮೀಯ ಬಳಗದ ಆಶಯವಾಗಿ ಸಾಹಿತಿ ಪ. ಮಾನುಸಗರ ಅವರು, ಪ್ರತಿಯೊಬ್ಬರಿಂದ ಲೇಖನಗಳನ್ನು ಬರೆಯಿಸಿ, ಸಂಗ್ರಹಿಸಿ, ಸಂಪಾದಿಸಿ, ಪ್ರಕಟಿಸುವ ಮೂಲಕ ಹಿರೇಮಠ ಅವರನ್ನು ಅಮರರಾಗಿಸಿದ ಕಳಕಳಿಯ ದ್ಯೋತಕವಾಗಿ ಈ ಕೃತಿ ಪ್ರಕಟಗೊಂಡಿದೆ. ಸಗರನಾಡಿನ (ಯಾದಗಿರಿ ಜಿಲ್ಲೆಯ ಶಹಾಪುರ, ಸುರಪುರ ಹಾಗೂ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಸೇರಿ) ಪ್ರದೇಶದ ಬಗ್ಗೆ ನಡೆ-ನುಡಿಯ ವಿಶೇಷ ಅಭಿಮಾನದೊಂದಿಗೆ ಬದುಕಿದ್ದ ಪ್ರೊ. ಸೂಗಯ್ಯ ಹಿರೇಮಠ ವ್ಯಕ್ತಿತ್ವದ ವಿವಿಧ ವೈಚಾರಿಕ ಆಯಾಮಗಳನ್ನುಇಲ್ಲಿಯ ಲೇಖನಗಳು ಪ್ರತಿಫಲಿಸುತ್ತವೆ. ಅವರ ಸಮಗ್ರ ಸಾಹಿತ್ಯ ದರ್ಶನದ ಸಂಕ್ಷಿಪ್ತ ಮಾಹಿತಿಯೂ ನೀಡುತ್ತದೆ.

About the Author

ಪ. ಮಾನು ಸಗರ
(02 August 1950)

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ. ಮಾನು ಸಗರ, ಎಂ.ಎ. ಪದವೀಧರರು. ಅರಣ್ಯ ಇಲಾಖೆಯ ಆಡಳಿತ ವ್ಯವಸ್ಥಾಪಕರಾಗಿ ನಿವೃತ್ತಿಯಾಗಿದ್ದು, ಸಗರ ನಾಡ ಸಂಪದ (ಕವನ ಸಂಕಲನ) ಕಂಪನ (ಕವನ ಸಂಕಲನ), ಚಿತ್ತ-ಚಿತ್ತಾರ (ಹನಿಗವನಗಳು), ಪ್ರೊ. ಸೂಗಯ್ಯ ಹಿರೇಮಠ ಸಂಸ್ಮರಣಾ ಗ್ರಂಥ ’ಸಗರನಾಡಿನ ಮಾಣಿಕ್ಯ’ , ಧಾರ್ಮಿಕ, ಅಧ್ಯಾತ್ಮಿಕ, ಶರಣ ಚಳವಳಿ, ಜನಪದ ಸಾಹಿತ್ಯ ಹೀಗೆ ಹಲವು ಆಯಾಮಗಳನ್ನು ಬಿಂಬಿಸುವ ’ಸಗರನಾಡು ಪರಂಪರೆ’ ಕೃತಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಹಲವು ಪ್ರಶಸ್ತಿ-ಗೌರವಗಳು ಸಂದಿವೆ. ...

READ MORE

Related Books