ಸಹಸ್ಪಂದನ

Author : ಟಿ.ಎಸ್. ವೇಣುಗೋಪಾಲ್

Pages 128

₹ 140.00




Year of Publication: 2014
Published by: ರಾಗಮಾಲ
Address: ಸಿ.ಹೆಚ್-73, 7ನೇ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು-570009
Phone: 9900082773

Synopsys

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಚಿರಪರಿಚಿತ ಹೆಸರಾದ ವಿದ್ವಾನ್ ಟಿ ಎಂ ಕೃಷ್ಣ  ಅವರು ಸಂಗೀತದ ಪ್ರಸ್ತುತಿಯಲ್ಲಿ ತಮ್ಮದೇ ಜಾಡು ಕಂಡುಕೊಂಡವರು. ಇವರ ಸಂಗೀತ ನಿರೂಪಣೆ ಸಾಂಪ್ರದಾಯಿಕವಾದರೂ ಅದರಲ್ಲಿ ಅಚ್ಚರಿಯಾಗುವಷ್ಟು ಹೊಸತನಗೋಚರವಾಗುತ್ತದೆ. ಸಂಗೀತದ ಮೂಲಕ ರಸಿಕರನ್ನು ಮೋಡಿಗೊಳಿಸುವುದಕ್ಕೆ ಮಾತ್ರ ಅವರು ಸೀಮಿತವಾಗಿಲ್ಲ. ಮನಸ್ಸು ಬಿಚ್ಚಿ ಮಾತನಾಡುವ ಕಾರಣದಿಂದಲೂ ಅವರು ಪ್ರಸಿದ್ಧರು. ಅವರ ಬರವಣಿಗೆ ತೀರಾ ಮೊನಚು. ಬಹುಶಃ ನೈತಿಕ ಆಕ್ರೋಶವಿಲ್ಲದೇ ಹೋದಲ್ಲಿ ಸ್ಥಗಿತವಾಗಿರುವ ಸಮಾಜದಲ್ಲಿ ಯಾವುದೇ ಚಲನೆಯು ಸಾಧ್ಯವಿಲ್ಲ ಅನ್ನಿಸುತ್ತದೆ. ಸಂಗೀತ ಎನ್ನುವುದು ಇವರಿಗೆ ಬದುಕನ್ನು ಅರ್ಥಮಾಡಿಕೊಳ್ಳುವ ಕ್ರಮ. ತಮ್ಮ ಬರಹಗಳ ಮೂಲಕ ಕರ್ನಾಟಕ ಸಂಗೀತದ ಹಿಂದಿರುವ ದರ್ಶನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಂಗೀತದ ಕಲಾತ್ಮಕತೆಯ ಬಗ್ಗೆ ಗಂಭೀರವಾಗಿ ಬರೆಯುತ್ತಿದ್ದಾರೆ. ಇವರ ಆಲೋಚನೆ ಕೇವಲ ಸಂಗೀತಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರಿಕೆಟ್, ರಾಜಕೀಯ, ಸಿನಿಮಾ,...... ಹೀಗೆ ಇವರ ಆಸಕ್ತಿಯ ವಿಷಯಗಳು ಹಲವು. ಕೃಷ್ಣ ಅವರ ಸಂಗೀತವನ್ನು ಕುರಿತ ಕೆಲವು ಲೇಖನಗಳನ್ನು ಇಲ್ಲಿ ಸಂಗ್ರಹಿಸಿ, ಅನುವಾದಿಸಿ ಕೊಡಲಾಗಿದೆ

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Related Books