ಸಾಹಿತಿ-ಕಲಾವಿದರ ಕಣ್ಣಲ್ಲಿ ಟಿಪ್ಪು

Author : ಶಿವರಾಮಯ್ಯ

Pages 60

₹ 30.00




Year of Publication: 2005
Published by: ಸಿರಿಗನ್ನಡ ಪ್ರಕಾಶನ
Address: ಸೀಮಾ ಮಂಜಿಲ್, 1ನೇ ಅಡ್ಡರಸ್ತೆ, ಬಾಪೂಜಿ ನಗರ, ಶಿವಮೊಗ್ಗ-577201
Phone: 08182-272449

Synopsys

ಮೈಸೂರಿನ ಹುಲಿ ಎಂದೇ ಪ್ರಖ್ಯಾತನಾದ ದೊರೆ ಟಿಪ್ಪುಸುಲ್ತಾನ. "ಪ್ರಪಂಚದ ಚರಿತ್ರೆಯಲ್ಲಿ ತನ್ನ ನಾಡಿನ ರಕ್ಷಣೆಗಾಗಿ ಇಬ್ಬರು ಮಕ್ಕಳನ್ನು ಶತ್ರುವಿಗೆ ಒತ್ತೆ ಇಟ್ಟಿದ್ದು ಮಾತ್ರವಲ್ಲದೆ, ರಣಾಂಗಣದಲ್ಲಿ ಬ್ರಿಟಿಷರ ವಿರುದ್ದ ಯುದ್ದ ಮಾಡುತ್ತಲೇ ಮಡಿದ ಏಕೈಕ ದೊರೆ ಟಿಪ್ಪು ಮಾತ್ರ." ಅನ್ನೋದು ಫ್ರೆಂಚ್ ಸಂಶೋಧಕನೊಬ್ಬನ ಮಾತು. ಇಂತಹ ಮಹಾನ್ ವೀರ ಟಿಪ್ಪು ಸುಲ್ತಾನನ ಕುರಿತು ಕನ್ನಡ ಕವಿಗಳು, ಲೇಖಕರು ಬರೆದ ಕವನಗಳನ್ನು, ಲೇಖನಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಇಲ್ಲಿ ಶಿವರಾಮಯ್ಯನವರ - ಸಾಹಿತಿಗಳು ಕಂಡ ಟಿಪ್ಪು,  ಎಸ್. ಸುಂದರ್‌ ಅವರ -ಟಿಪ್ಪು ಕಾಲದ ಕಲಾ ವಿನ್ಯಾಸ, ಎಸ್. ವೆಂಕಟೇಶ್ ಅವರ -ಕಲಾವಿದರ ಕಣ್ಣಲ್ಲಿ ಟಿಪ್ಪು ಮುಂತಾದ ಲೇಖನಗಳ ಜೊತೆಗೆ  ಸಂ. ಲಿಂಗದೇವರು ಹಳೇಮನಿ ಅವರ ಅನುಬಂದ-ಲಾವಣಿ, ಕುವೆಂಪು ಅವರ -ಕರ್ನಾಟ ರಾಷ್ಟ್ರಗೀತೆ, ಎಂ. ಗೋಪಲಕೃಷ್ಣ ಅಡಿಗರ- ಟೀಪುವೇ, ಬಂಜಗೆರೆ ಜಯಪ್ರಕಾಶ್ ಅವರ-ಟೀಪು, ಮೂಗಳ್ಳಿ ಗಣೇಶ್ ಅವರ- ಟಿಪ್ಪು ಕೇಳಿದ್ದ ಕನಸಲ್ಲಿ, ಮಹಾತ್ಮರ ಜೊತೆಯಲ್ಲಿ ಮುಂತಾದ ಕವನಗಳಿವೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books