ಸಾಹಿತ್ಯ ಸಂಕೀರ್ಣ (ಶಾಸ್ತ್ರೀಯ- ಸಂಪುಟ 12)

Author : ಟಿ.ವಿ. ವೆಂಕಟಾಚಲಶಾಸ್ತ್ರೀ

Pages 230

₹ 180.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ಬರೆದ ಸಾಹಿತ್ಯ ಸಂಕೀರ್ಣ ಶಾಸ್ತ್ರೀಯ ಕೃತಿ ಶ್ರೇಣಿಯ ಹನ್ನೆರಡನೆಯ ಸಂಪುಟವಿದು ಇದರಲ್ಲಿ ಸಣ್ಣ ಸಣ್ಣ ಪ್ರಾಸಂಗಿಕಗಳೂ ಸೇರಿದಂತೆ ಸಾಮಾನ್ಯ ಮತ್ತು ವಿಶೇಷ ಸಂದರ್ಭಗಳ ಬಿಡಿಬರಹಗಳೂ ಭಾಷಣಗಳೂ ಸೇರಿವೆ. ಭಾಷೆ-ವ್ಯಾಕರಣ, ಸಮಾಜ-ಸಂಸ್ಕೃತಿ-ಸಾಹಿತ್ಯ, ಸಂಘ-ಸಂಸ್ಥೆಗಳು ಸಾಹಿತಿ-ಕಲಾವಿದರು, ಸಭೆ-ಸಮ್ಮೇಳಗಳು, ಉತ್ಸವ ವಿಶೇಷಗಳು ಹೀಗೆ ಹಲವು ವೇದಿಕೆ-ವಿದ್ಯಮಾನಗಳ ಸಂಬಂಧದಲ್ಲಿ ಇಲ್ಲಿಯ ಪ್ರಾಸಂಗಿಕಗಳೂ, ಬರಹಗಳು ಹಾಗೂ ಭಾಷಣಗಳು ಇವೆ.

About the Author

ಟಿ.ವಿ. ವೆಂಕಟಾಚಲಶಾಸ್ತ್ರೀ
(26 August 1933)

ಸಂಶೋಧಕ, ಪ್ರಾಧ್ಯಾಪಕ ಟಿ.ವಿ.ವೆಂಕಟಾಚಲ ಶಾಸ್ತ್ರೀ ಅವರು ಕನ್ನಡ ಭಾಷೆಯನ್ನು ಶ್ರೀಮಂತಿಕೆ ಹೆಚ್ಚಿಸಿದವರು. ಶಾಸ್ತ್ರಿಗಳು,1933ರ ಆಗಸ್ಟ್ 26 ರಂದು, ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ಜನಿಸಿದರು.  ತಂದೆ ವೆಂಕಟಸುಬ್ಬಾಶಾಸ್ತ್ರಿಗಳು. ತಾಯಿ ಸುಬ್ಬಮ್ಮ. ಎಂ.ಎ. ಮತ್ತು ಪಿಎಚ್.ಡಿ. ಪದವಿ ಪಡೆದ ನಂತರ ವೆಂಕಟಾಚಲ ಶಾಸ್ತ್ರಿಗಳು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ವೃತ್ತಿಯನ್ನು ಮಾಡಿ, ನಂತರ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ನಿಘಂಟು ರಚನಾ ಸಮಿತಿಯ ಸಂಪಾದಕ ಸಮಿತಿಯ ಸದಸ್ಯರಾಗಿದ್ದ ಅವರು ನಂತರ ನಿಘಂಟು ಪರಿಷ್ಕರಣ ಸಮಿತಿ ಪ್ರಧಾನ ಸಂಪಾದಕರಾಗಿದ್ದರು. ವ್ಯಾಕರಣ, ಛಂದಸ್ಸು, ...

READ MORE

Related Books