ಸಹೃದಯ ಸಂವಾದ

Author : ಎಸ್. ವಿದ್ಯಾಶಂಕರ

Pages 484

₹ 300.00




Year of Publication: 2005
Published by: ಪ್ರಿಯದರ್ಶಿನಿ ಪ್ರಕಾಶನ
Address: # 138, 7ನೇ ಸಿ ಮುಖ್ಯರಸ್ತೆ, ವಿಜಯನಗರ 2ನೇ ಹಂತ, ಬೆಂಗಳೂರು-560040

Synopsys

ಡಾ. ಜಿ.ಎಸ್. ಆಮೂರರ ವಿಮರ್ಶೆ ಕೃಷಿ ಸೇರಿದಂತೆ ವಿವಿಧ ಪ್ರಕಾರದ ಸಾಹಿತ್ಯ ಕುರಿತು ವಿವಿಧ ಲೇಖಕರು ಬರೆದು ಅರ್ಪಿಸಿದ ಅಭಿನಂದನಾ ಕೃತಿ-ಸಹೃದಯ ಸಂವಾದ. ಕನ್ನಡ ವಿಮರ್ಶೆಯ ಪರಂಪರೆ ಎಂಬ ಉಪಶೀರ್ಷಿಕೆಯಡಿ ಈ ಕೃತಿಯನ್ನು ಸಾಹಿತಿಗಳಾದ ಡಾ. ಎಸ್. ವಿದ್ಯಾಶಂಕರ ಹಾಗೂ ಡಾ. ಜಿ.ಎಂ. ಹೆಗಡೆ ಸಂಪಾದಿಸಿದ್ದಾರೆ. ಜಿ.ಎಸ್. ಆಮೂರರು ವ್ಯಕ್ತಿಚಿತ್ರಣ, ವಿಮರ್ಶೆ, ಲೇಖನ ಹೀಗೆ ವಿವಿಧ ಪ್ರಕಾರಗಳ ಗಂಭೀರ ಅಧ್ಯಯನ ಹಾಗೂ ಕೃತಿ ರಚನೆಕಾರರ ಪೈಕಿ ಒಬ್ಬ ವಿದ್ವಾಂಸರು. ಹತ್ತು ಹಲವು ಕೃತಿಗಳನ್ನು ಇಂಗ್ಲಿಷ್ ನಲ್ಲೂ ಬರೆದಿದ್ದು ರಾಷ್ಟ್ರೀಯವಾಗಿ ವಿಶೇಷವಾಗಿ ವಿಮರ್ಶೆ ಲೋಕದಲ್ಲಿ ಗಮನ ಸೆಳೆದವರು. ಆಮೂರರ ಸಾಹಿತ್ಯಕ ಕೃತಿಗಳ ಮೂಲಕ ಅವರ ವ್ಯಕ್ತಿತ್ವದ ಎತ್ತರವನ್ನು ಕಾಣಿಸುವ ಪ್ರಯತ್ನವೇ ಅವರ ಅಭಿನಂದನಾ ಗ್ರಂಥ.

About the Author

ಎಸ್. ವಿದ್ಯಾಶಂಕರ

ಎಸ್. ವಿದ್ಯಾಶಂಕರ ಅವರು ಚಾಮರಾಜ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿಯಲ್ಲಿ ಜನಿಸಿದರು. ತಂದೆ ವಿದ್ವಾನ್' ಸ.ಸ. ಶಿವಶಂಕರಪ್ಪ ತಾಯಿ ವಿಶಾಲಾಕ್ಷಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದು ೧೯೬೬ರಲ್ಲಿ ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಎಂ.ಎ. ಪದವಿ ಗಳಿಸಿ ೧೯೭೧ರಲ್ಲಿ ಬೆಂಗಳೂರು ವಿ.ವಿ. ಪಿಎಚ್.ಡಿ. ಪದವಿ ಗಳಿಸಿದರು. ಬೆಂಗಳೂರು ವಿ.ವಿ. ಕನ್ನಡ ವಿಭಾಗದ ಸ್ನಾತಕೋತ್ತರ ಸಂಶೋಧನ ಸಹಾಯಕರಾಗಿ ಸೇವೆ ಸಲ್ಲಿಸಿ ೧೯೭೦ ರಿಂದ ೮೫ರರಿಗೆ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ನಂತರ ನಿರ್ದೇಶಕರಾಗಿ ಸೇವೆ ಸಲ್ಲಿಸಿ ೨೦೦೧ರಲ್ಲಿ ವೃತ್ತಿಯಿಂದ ವಿಶ್ರಾಂತಿ ಪಡೆದರು. ೧೯೯೫೪-೯೭ರಲ್ಲಿ ಹಂಪಿಯ ಕನ್ನಡ ...

READ MORE

Related Books