ಸೈಂಧವ ಸಂಕಥನ

Author : ಪಿ. ಆರಡಿಮಲ್ಲಯ್ಯ ಕಟ್ಟೇರ

Pages 232

₹ 260.00




Year of Publication: 2021
Published by: ಪಲ್ಲವ ಪ್ರಕಾಶನ
Address: # ಚನ್ನಪಟ್ಟಣ ಅಂಚೆ, ಎಮ್ಮಿಗನೂರು (ವಯಾ) ಬಳ್ಳಾರಿ-583113.
Phone: 9840354507

Synopsys

ಲೇಖಕ ಪಿ. ಆರಡಿಮಲ್ಲಯ್ಯ ಕಟ್ಟೇರ ಅವರ ಕೃತಿ-ಸೈಂಧವ ಸಂಕಥನ. ಕರ್ನಾಟಕದ ಪ್ರಸಿದ್ದ ಜನಪದ ಕಲೆ-ಬಯಲಾಟದ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು. ಬಯಲಾಟ ಸಂಕಥನದ ಹಿನ್ನೆಲೆಯಾಗಿ ಆರ್ಯ-ದ್ರಾವಿಡ ಸಂಘರ್ಷವನ್ನು ವಿಮರ್ಶಿಸಿದ್ದಾರೆ ಬಯಲಾಟಗಳನ್ನು ಲೇಖಕರು ಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸಿಲ್ಲ. ಬದಲಾಗಿ, ಬಯಲಾಟ ಅಧ್ಯಯನಗಳ ಭಾಷಿಕ ಗಡಿರೇಖೆಗಳನ್ನು ಗಮನಿಸಿದ್ದಾರೆ. ಆ ಅಧ್ಯಯನಕ್ಕೊಂದು ಬಲವಾದ ತಾತ್ವಿಕ ಚೌಕಟ್ಟನ್ನು ನೀಡಲು ಯತ್ನಿಸಿದ್ದಾರೆ

ಕೆನಡಾದ ಅಲ್ಸರ್ಟಾ ವಿಶ್ವವಿದ್ಯಾಲಯದ ಶಶಿಕುಮಾರ್ ‘ಫ್ರೆಂಚ್ ತತ್ವಜ್ಞಾನಿ ಮಿಶೆಲ್ ಫ್ರಕೊ ಪ್ರಕಾರ, ಸಂಕಥನ ಎಂಬುದು ಜ್ಞಾನ ಹಾಗೂ ಅರ್ಥವನ್ನು ಉತ್ಪಾದಿಸುವ, ಚಾರಿತ್ರಿಕವಾಗಿ ಅನಿಶ್ಚಿತವಾಗಿರುವ ಸಾಮಾಜಿಕ ವ್ಯವಸ್ಥೆಯನ್ನು ಸೂಚಿಸುವ ಪರಿಭಾಷೆ. ಮಾನವ ಶಾಸ್ತ್ರೀಯ ಸಂಶೋಧನಾ ವಿಧಾನವು ಕನ್ನಡ ಸಂಶೋಧಕರನ್ನು ಆಕರ್ಷಿಸಿದ್ದು ವಿರಳಾತಿವಿರಳ. ಹೊಸ ಸಹಸ್ರಮಾನದಲ್ಲಿ ಇಂತಹ ಸಾಹಸಕ್ಕೆ ಕೈ ಹಾಕಿರುವ ಲೇಖಕರು ಅಭಿನಂದನಾರ್ಹರು’ ಎಂದು ಪ್ರಶಂಸಿಸಿದ್ದರೆ, ಸಾಹಿತಿ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ‘ಈ ಕೃತಿಯ ಮೂಲಕ ಲೇಖಕರು ಬಹುಸಂಸ್ಕೃತಿಯ ಲೋಕದೃಷ್ಟಿಯ ಬಹುತ್ವವನ್ನು ಸ್ಥಾಪಿಸಬಯಸಿದ್ದಾರೆ. ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸುವ ಪ್ರಯತ್ನವಿದು. ತಿಳಿವಳಿಕೆಯ ಸೀಮಿತ ಚೌಕಟ್ಟು ಒಡೆಯುವ ಪ್ರಯತ್ನವೂ ಹೌದು. ನಿರ್ವಸಾಹತೀಕರಣದತ್ತ ಹಾಕುವ ಹೆಜ್ಜೆಯೂ ಹೌದು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

About the Author

ಪಿ. ಆರಡಿಮಲ್ಲಯ್ಯ ಕಟ್ಟೇರ

ಪಿ.ಆರಡಿ ಮಲ್ಲಯ್ಯ ಕಟ್ಟೇರ ಅವರು ಮೂಲತಃ ಚಳ್ಳಕೆರೆ ತಾಲೂಕಿನ ಓಬಯ್ಯನಹಟ್ಟಿ ಕಟ್ಟೇರಕಪ್ಲೆ ಗ್ರಾಮದವರು. ತಂದೆ ಪರ್ವತಯ್ಯ, ತಾಯಿ ಪಾರ್ವತಮ್ಮ. ಕುವೆಂಪು ವಿ.ವಿ. ಸ್ನಾತಕೋತ್ತರ ಪದವಿಯಲ್ಲಿ 2ನೇ ರ್‍ಯಾಂಕ್, ‘ನೀರಗನ್ನಡಿ’ ಕವನ ಸಂಕಲನ ಪ್ರಕಟವಾಗಿದೆ. ಬಯಲಾಟ ಅಕಾಡೆಮಿ ಫೆಲೋಶಿಪ್ ನಡಿ ‘ಬಯಲಾಟದ ಕಥನಗಳಲ್ಲಿ ಸಾಂಸ್ಕೃತಿಕ ಸಂಘರ್ಷ: ಚಾರ್ವಾಕ, ಬುದ್ಧ, ಡಾರ್ವಿನ್, ಕಾರ್ಲಮಾಕ್ಸ್ ಮತ್ತು ಅಂಬೇಡ್ಕರ್ ದೃಷ್ಟಿಕೋನ’  ಮಹಾಪ್ರಬಂಧ ಮಂಡಿಸಿದ್ದಾರೆ. ಅಂಬೇಡ್ಕರ್ ಸಂಶೋಧನಾ ಫೆಲೋಶಿಪ್ ಅಡಿ ‘ಆದಿಯಾ, ಕಲ್ಲಾಡಿ, ನಾಯಾಡಿ, ನಲ್ಕಡಾಯ, ಜಗ್ಗಲಿ’ ಶೀರ್ಷಿಕೆಯಡಿ ಅಲೆಮಾರಿಗಳ ಕುರಿತು ಅಧ್ಯಯನ ಮಾಡಿದ್ದಾರೆ. ಆಧುನಿಕ ಸಮುದಾಯಗಳು ಹಾಗೂ ಕುಲಚಿನ್ಹೆಗಳು’ ಇವರ ಪಿಎಚ್.ಡಿ. ಪ್ರಬಂಧ. ಭಾಷೆ ಕುರಿತು ಇವರು ಬರೆದ ...

READ MORE

Related Books