ಸಜ್ಜನರಿಗೆ ಕಷ್ಟಗಳು ಏಕೆ ಬರುತ್ತವೆ?

Author : ಜಿ. ಎಸ್. ಸಿದ್ಧಲಿಂಗಯ್ಯ

Pages 108

₹ 60.00




Year of Publication: 2012
Published by: ಸಾಧು ವಾಸ್ವಾನಿ ಮಿಷನ್
Address: ಪುಣೆ

Synopsys

ಬದುಕಿನ ಬಂಡಿ ಎಳೆವಾಗ ನಮಗೆ ಅತೀತವಾದ ಅನೇಕ ಪ್ರಶ್ನೆಗಳು ಎದುರಾಗುತ್ತವೆ. ಆಗ ಬಾಧೆಗೊಳಗಾದಾಗ ಅಥವಾ ಪರಿಹಾರವಾಗದಂತೆ ತೋರುವ ಸಮಸ್ಯೆ ಅಥವಾ ಸಂದರ್ಭ ಎದುರಾದಾಗ ನಮ್ಮಲ್ಲಿ ಅನೇಕರನ್ನು ಕಾಡುವ ಸಾರ್ವತ್ರಿಕ ಪ್ರಶ್ನೆ - ನನಗೇ ಏಕೆ ಹೀಗಾಗಬೇಕು? ಅಂತಹ ಹಲವಾರು ಸಂಕಷ್ಟಗಳ ಪ್ರಶ್ನೆಗಳಿಗೆ ಉತ್ತರ ಈ ಕೃತಿಯಲ್ಲಿದೆ. ದಾದಾ ವಾಸ್ವಾನಿಯವರ ಪ್ರವಚನಗಳು ಮತ್ತು ಲೇಖನಗಳ ಆಯ್ದ ಭಾಗ ‘ಸಜ್ಜನರಿಗೆ ಕಷ್ಟಗಳು ಏಕೆ ಬರುತ್ತವೆ?’. ಈ ಕೃತಿಯನ್ನು ಸಾಹಿತಿ ಜಿ.ಎಸ್. ಸಿದ್ಧಲಿಂಗಯ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

About the Author

ಜಿ. ಎಸ್. ಸಿದ್ಧಲಿಂಗಯ್ಯ
(20 February 1931)

ಕನ್ನಡ ಸಾಹಿತ್ಯ ಪರಿಷತ್ತಿನ 17ನೇ (1988-1992) ಅಧ್ಯಕ್ಷರಾಗಿದ್ದ ಜಿ.ಎಸ್.ಸಿದ್ಧಲಿಂಗಯ್ಯ, ವಚನ ಸಾಹಿತ್ಯ ವಿದ್ವಾಂಸರು, ಶಿಕ್ಷಣ ತಜ್ಞರು, ಕವಿಗಳು ಆಗಿದ್ದರು. ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ 1931 ರ ಫೆ. 20 ರಂದು ಜನನ.  ಮೈಸೂರು ವಿ.ವಿ. ಮಹಾರಾಜ ಕಾಲೇಜಿನಿಂದ ಬಿ.ಎ. ಮೈಸೂರು ವಿ.ವಿ.ಯಿಂದ 1961ರಲ್ಲಿ ಎಂ.ಎ. ಪದವೀಧರರು. ಸರ್ಕಾರಿ ಕಾಲೇಜಿನ ಅಧ್ಯಾಪಕ-ಪ್ರಾಧ್ಯಾಪಕ-ಪ್ರಾಂಶುಪಾಲರಾಗಿ ನಂತರ 1988 ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ವಿಮರ್ಶೆ : ಮಹಾನುಭಾವ ಬುದ್ಧ, ಕವಿ ಲಕ್ಷ್ಮೀಶ, ಚಾಮರಸ, ಹೊಸಗನ್ನಡ ಕಾವ್ಯ, ಕವನ ಸಂಕಲನ : ಉತ್ತರ, ಚಿತ್ರ-ವಿಚಿತ್ರ, ಐವತ್ತರ ನೆರಳು, ಹಾಗೂ ಸಂಪಾದನೆ ...

READ MORE

Related Books