ಸಮಾಧಾನ ಚಿತ್ತರಾಗಿರಿ

Author : ಸಿ.ಆರ್. ಚಂದ್ರಶೇಖರ್

Pages 38

₹ 20.00




Year of Publication: 2018
Published by: ಸಮಾಧಾನ ಆಪ್ತ ಸಲಹಾ ಕೇಂದ್ರ
Address: # 324. 6 ನೇ ಕ್ರಾಸ್, ಅರೆಕೆರೆ ಮೈಕೋ ಲೇಔಟ್ ಬಸ್ ನಿಲ್ಧಾಣದ ಹತ್ತಿರ, ಬನ್ನೇರುಘಟ್ಟ ರಸ್ತೆ. ಬೆಂಗಳೂರು . 560076
Phone: 91802648292

Synopsys

ಮನೋವೈದ್ಯ ಡಾ. ಸಿ.ಆರ್. ಚಂದ್ರಶೇಖರ ಅವರ ಕೃತಿ-ಸಮಾಧಾನ ಚಿತ್ತರಾಗಿರಿ. ನೆಮ್ಮದಿಯ ಮನಸ್ಸು ಹಾಗೂ ಜೀವನದ ಯಶಸ್ಸು ಎಂಬುದು ಈ ಕೃತಿಯ ಉಪಶೀರ್ಷಿಕೆಯಾಗಿದೆ. ಬದುಕಿನಲ್ಲಿ ಏನೆಲ್ಲ ಒತ್ತಡಗಳು ಬರುವುದು ಸಾಮಾನ್ಯ. ಅವುಗಳನ್ನು ನಿಯಂತ್ರಿಸಲಾಗದು. ಈ ಒತ್ತಡಗಳನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಈ ನಿರ್ವಹಣೆಯು ಒಂದು ಕಲೆ. ಕಲಿಯಲೂಬಹುದು. ಉತ್ತಮ ವ್ಯಕ್ತಿತ್ವದ ಮೂಲ ಮೌಲ್ಯ ಎಂದರೆ ಸಮಾಧಾನದಿಂದ ಇರುವುದು. ಆಂದರೆ, ಈ ಸಮಾಧಾನದ ಪ್ರಕ್ರಿಯೆಯಲ್ಲಿ ಕೋಪಕ್ಕೆ, ಅವಸರಕ್ಕೆ, ಯಾರದೋ ಒತ್ತಡಕ್ಕೆ ಮಣಿಯುವ ಸಾಧ್ಯತೆ ಕಡಿಮೆ. ಆದ್ದರಿಂದ, ಜೀವನ ನೆಮ್ಮದಿಗೆ ಸಮಾಧಾನದಿಂದ ಇರುವುದು ಅಗತ್ಯ ಎಂಬುದನ್ನು ಮನೋವೈಜ್ಞಾನಿಕವಾಗಿ ಸಮರ್ಥಿಸಿಕೊಳ್ಳುವ ಕೃತಿ ಇದು.

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books