ಸಮಾಧಿ ಮೇಲಿನ ಹೂ

Author : ಪದ್ಮಿನಿ ನಾಗರಾಜ್ ಎಸ್.ಪಿ.

₹ 150.00




Year of Publication: 2016
Published by: ನಿರಂಕುಶ ಪ್ರಕಾಶನ
Address: ನಂ.83, 1ನೇ ಫ್ಲೋರ್, ಡಿ ಬ್ಲಾಕ್, ಗುಂಡೂರಾವ್ ಬಿಲ್ಡಿಂಗ್, ಅಗ್ರಹಾರ ದಾಸರಹಳ್ಳಿ, ಬೆಂಗಳೂರು- 560079
Phone: 8123260454

Synopsys

ಲೇಖಕಿ ಪದ್ಮಿನಿ ನಾಗರಾಜ್‌ ಎಸ್.ಪಿ. ಅವರ ಕಥಾಸಂಕಲನ ಕೃತಿ ʻಸಮಾಧಿ ಮೇಲಿನ ಹೂʼ. ಮುಸ್ಲಿಂ ಹೆಣ್ಣುಮಕ್ಕಳ ದಾರುಣ ಬದುಕಿನ ಮೂರು ತಲೆಮಾರುಗಳು, ಪುರುಷ ಸಮಾಜದ ದಬ್ಬಾಳಿಕೆ, ರೈತರ ಆತ್ಮಹತ್ಯೆ, ತೃತೀಯ ಲಿಂಗಿಗಳ ಬಗ್ಗೆ ಪೋಷಕರು-ಸಮಾಜ-ಸರಕಾರದ ಜವಾಬ್ದಾರಿಗಳು, ಮಕ್ಕಳನ್ನು ನೋಡಿಕೊಳ್ಳುವುದರ ಬಗೆಗಿನ ತಾತ್ಸಾರ, ಕ್ಯಾನ್ಸರ್‌ ಕಾಯಿಲೆ ತರುವ ಸಂಕಷ್ಟ ಮುಂತಾದ ಸತ್ಯ ಘಟನೆಗಳ ಆಧಾರಿತ 11 ಕತೆಗಳು ಇಲ್ಲಿವೆ. ಜೊತೆಗೆ ಮಲೆನಾಡಿನ ಗ್ರಾಮೀಣ ಬದುಕು, ಪೂಜೆ, ಹಬ್ಬಗಳಲ್ಲಿ ಸಹಜವಾಗಿ ಬರುವ ಕನ್ನಡ ಬಳಕೆಯ ಪದಗಳು ಹಾಗೂ ಅಲ್ಲಿನ ಪರಿಸರದ ಸಣ್ಣ ಪುಟ್ಟ ಸಂಗತಿಗಳ ಸಹಿತ ಕತೆಗಳ ಮೂಲಕ ಪದ್ಮಿನಿ ಅವರು ಕಟ್ಟಿಕೊಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಕನಸುಗಳ ಕೈ ಹಿಡಿದು, ಸಾವಿನ ನಿರೀಕ್ಷೆ, ತಪ್ತ, ಸಮಾಧಿ ಮೇಲಿನ ಹೂ, ತನು ಕರಗದವರಲ್ಲಿ, ಸಾವಿರ ಸುಳ್ಳನ್ನು ಹೇಳಿ, ಮನದ ತಕ್ಕಡಿ, ಸ್ವಲ್ಪ ಅಡ್ಜಸ್ಟ್‌, ಧ್ಯಾನ, ಹಸ್ತ ಮೈಥುನ, ಅಪ್ಪ ಮತ್ತು ಮಾತು ಮುಂತಾದ ಶೀರ್ಷಿಕೆಗಳ ಕತೆಗಳಿವೆ.

About the Author

ಪದ್ಮಿನಿ ನಾಗರಾಜ್ ಎಸ್.ಪಿ.
(06 April 1966)

ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ. 'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) ...

READ MORE

Related Books