ಸಮಾಜಕ್ಕೂ ಸರಕಾರಕ್ಕೂ ಸಂಬಂಧವಿದೆಯೇ!?

Author : ಹರಿಹರಪ್ರಿಯ (ಸಾತವಲ್ಲಿ ವೇಂಕಟವಿಶ್ವನಾಥಭಟ್ಟ)

Pages 352

₹ 400.00




Year of Publication: 2022
Published by: ಹರಿಹರ ಪ್ರಿಯ
Address: ಹರಿಹರ ಪ್ರಿಯ ಪುಸ್ತಕಮನೆ,ಬಿಸಿಸಿಹೆಚ್‌ಎಸ್‌ ಬಡಾವಣೆ ವಾಜರಹಳ್ಳಿ, ತಲಘಟ್ಟಪುರ ಬೆಂಗಳೂರು 560109
Phone: 9845867184

Synopsys

ಸಮಾಜಕ್ಕೂ ಸರಕಾರಕ್ಕೂ ಸಂಬಂಧವಿದೆಯೇ!? ಹರಿಹರಪ್ರಿಯ ಅವರ ವೈಚಾರಿಕ ಲೇಖನವಾಗಿದೆ. ಈ ಕೃತಿಯು ಪ್ರತೀದಿನ, ಪ್ರತೀಕ್ಷಣ ರಾಷ್ಟ್ರದಲ್ಲಿ, ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಗ್ಗೋಲೆ ನಡೆದಿದೆ: ರಾಜಕಾರಣಿಗಳು ಎಂದು ಅಧಿಕಾರಿಗಳು, ಅಧಿಕಾರಿಗಳು ಎಂದು ನ್ಯಾಯಾಂಗದವರು, ನ್ಯಾಯಾಲಯಗಳು ಎಂದು ಸಮೂಹ ಮಾಧ್ಯಮಗಳು - ಕೊಕ್ಕೋ ಆಟದಲ್ಲಿ ತೊಡಗಿವೆ. ಹೀಗಾಗಿ ಸಮಾಜ ಹಾಗೂ ಸರಕಾರಗಳ ಸಂಬಂಧ ಸಮತೋಲನ ತಪ್ಪಿದೆ. ಇಂಥ ಸಂದರ್ಭದಲ್ಲಿ ಸಾಂಸ್ಕೃತಿಕ ರಂಗದವರು, ಗೆದ್ದೆತ್ತಿನ ಬಾಲವನ್ನೂ ಕೊಂಬನ್ನೊ ಹಿಡಿದು ತೂರಾಡುತ್ತಿದ್ದಾರೆ. ಕಳೆದ ಅಯ್ಯತ್ತು ವರ್ಷಗಳ ಇಂತಹ ಎಷ್ಟೋ ಸತ್ಯಸಂಗತಿಗಳು, ಇಲ್ಲಿನ ಪುಟ ಪುಟಗಳಲ್ಲಿ ರೂಪ ತಾಳಿವೆ. ದನಿಯೇನು, ಅಸ್ತಿತ್ವವನ್ನೇ ಹತ್ತಿಕ್ಕಲು ಸ್ವಯಂಸಿದ್ಧರು, ಸಮರೋಪಾದಿಯಲ್ಲಿ ಸಜ್ಜಾಗುತ್ತಿದ್ದಾರೆ. ಪ್ರತಿಯೊಬ್ಬರೂ ತಮ್ಮ ಪ್ರಾಣವಾಯು, ಮೆದುಳು, ಬುದ್ಧಿ ಸಂರಕ್ಷಿಸಿಕೊಳ್ಳಲು 'ಸಮಾಜಕ್ಕೂ ಸರಕಾರಕ್ಕೂ ಸಂಬಂಧವಿದೆಯೇ?' ಎಂಬ ಆಶ್ಚರ್ಯ ಪ್ರಶ್ನೆಯನ್ನು ತಮ್ಮೊಳಗೇ ಪ್ರತಿಧ್ವನಿಸಲೆಂದೇ, ಮೊಟ್ಟ ಮೊದಲ ಬಾರಿಗೆ ಹಕ್ಕು ಬಾಧ್ಯತೆ ಹೊತ್ತ ಕನ್ನಡದ ಕೃತಿಯೊಂದು, ನಿಮ್ಮ ಕೈಸೇರುತ್ತಿದೆ. ಆ ಮೂಲಕ ಪಂಚೇಂದ್ರಿಯಗಳು ಸ್ವಚ್ಛಗೊಳ್ಳಲಿ, ಪ್ರಜಾಪ್ರಭುತ್ವ ಸಂರಕ್ಷಣೆಗೊಳ್ಳಲಿ, ಮಾನವ ಧರ್ಮ ಸ್ಥಾಪಿತಗೊಳ್ಳಲಿ” ಎಂಬುದು 'ಪುಸ್ತಕಮನೆ' ಹರಿಹರಪ್ರಿಯರ ಬದುಕಿನ ಮಹತ್ವಾಕಾಂಕ್ಷೆ ಹಾಗೂ ಕೃತಿಯ ಉದ್ದೇಶವಾಗಿದೆ.

About the Author

ಹರಿಹರಪ್ರಿಯ (ಸಾತವಲ್ಲಿ ವೇಂಕಟವಿಶ್ವನಾಥಭಟ್ಟ)

ಆಂಧ್ರಮೂಲದ ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಪ್ರೌಢಶಾಲೆಯವರೆಗೆ ಓದಿ ನಂತರ ’ಕನ್ನಡ ಜಾಣ’ದಲ್ಲಿ ಉನ್ನತಮಟ್ಟದ ಯಶಸ್ಸು ಸಾಧಿಸಿದ ಅವರು ರಾಷ್ಟ್ರಕವಿ ಕುವೆಂಪು ಅವರನ್ನು ಕನ್ನಡದ ಗುರು ಎಂದು ಕೊಂಡ ಹಾಗೆ ತೆಲುಗಿನ ಮಹಾಕವಿ ಶ್ರೀಶ್ರೀ ಅವರು ಹೋರಾಟಕ್ಕೆ ಗುರು. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ನಾನ್ ಅಕಾಡೆಮಿಕ್ ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ ಎಂದು ಹೆಸರು. ...

READ MORE

Related Books