ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ?

Author : ಆರ್. ವೆಂಕಟರೆಡ್ಡಿ

Pages 228

₹ 200.00




Year of Publication: 2015
Published by: ಧರಣಿ ಪ್ರಿಂಟರ್ಸ್
Address: # CB-No. 479, 3ನೇ ‘ಸಿ’ ಮುಖ್ಯರಸ್ತೆ, 1ನೇ ಹಂತ, 2ನೇ ವಲಯ, ಮಂಜುನಾಥನಗರ, ರಾಜಾಜಿನಗರ, ಬೆಂಗಳೂರು
Phone: 9448236969

Synopsys

ಮನೋವಿಜ್ಞಾನ ಉಪನ್ಯಾಸಕ ಡಾ. ಆರ್. ವೆಂಕಟರೆಡ್ಡಿ ಅವರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬರೆದ ಕೃತಿ-ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ?. ಓದುವುದು ಒಂದು ಕಲೆ. ಹೇಗೆ ಓದಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಂಡರೆ ಆ ಓದು ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುತ್ತದೆ. ಮತ್ತು, ಅದನ್ನು ತಪ್ಪಿಲ್ಲದೇ ಪುನರ್ ಉಚ್ಛರಿಸಬಹುದು. ಬರೆಯಬಹುದು. ಹೀಗಾಗಿ, ಅಂಕಗಳು ಸಹ ಹೆಚ್ಚಿಗೆ ಬರುತ್ತವೆ. ಓದುಗ ಈ ಕಲೆಯನ್ನು ತಿಳಿದರೆ ಸಮರ್ಥ ವಿದ್ಯಾರ್ಥಿಯೇ ಅಗುವುದರಲ್ಲಿ ಸಂಶಯವೇ ಇಲ್ಲ. ಓದುವುದು, ಮನನ ಮಾಡುವುದು, ನೆನಪಿನಲ್ಲಿಟ್ಟುಕೊಳ್ಳುವುದು, ಬರೆಯುವುದು, ಹೇಳುವುದು ಎಲ್ಲವೂ ಅರ್ಥಪೂರ್ಣ ಓದಿನ ವಿವಿಧ ಪ್ರಕಾರಗಳು. ಓದಿನಲ್ಲಿ ಒಂದು ಶಿಸ್ತಿದೆ. ವಿದ್ಯಾರ್ಥಿಯ ಮನಸ್ಸಿನಲ್ಲಿ ಈ ಓದು ಹೇಗೆ ಪ್ರಭಾವ ಬೀರುತ್ತದೆ. ಮಾತ್ರವಲ್ಲ; ಓದನ್ನು ಹೆಚ್ಚಾಗಿ ಪ್ರೀತಿಸುವಂತೆ ಮಾಡುತ್ತದೆ.  ಬದುಕಿನ ನೆಮ್ಮದಿಯಾಗಿಯೂ ಈ ಓದು ಹೇಗೆ ಕೆಲಸ ಮಾಡುತ್ತದೆ. ಇಂತಹ ಹತ್ತು ಹಲವು ಸಂಗತಿಗಳನ್ನು ಮನೋವೈಜ್ಞಾನಿಕವಾಗಿ ವಿವರಿಸಿರುವ ಈ ಕೃತಿಯು, ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ; ದೊಡ್ಡವರಿಗೂ ಸಹ ಮಾರ್ಗದರ್ಶಿಯಾಗಿದೆ. .

About the Author

ಆರ್. ವೆಂಕಟರೆಡ್ಡಿ
(25 November 1961)

ಲೇಖಕ ಡಾ. ಆರ್. ವೆಂಕಟರೆಡ್ಡಿ ಅವರು ಮೂಲತಃ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ರುದ್ರಾವರಂ ಗ್ರಾಮದವರು. ತಂದೆ ಶಂಭುರೆಡ್ಡಿ, ತಾಯಿ ಅಯ್ಯಮ್ಮ. ಎಂ.ಎ (ಮನೋವಿಜ್ಞಾನ), ಎಂ.ಇಡಿ ಹಾಗೂ ಪಿಎಚ್ ಡಿ  ಪದವೀಧರರು.  ವಿದ್ಯಾರ್ಥಿಗಳಿಗೆ ಆಪ್ತಸಮಾಲೋಚನೆ, ಸೈಕೋಥೆರಪಿ, ಲೈಂಗಿಕವಾದ ಸಾಮಾನ್ಯ ದುರ್ಬಲತೆಗಳು ಹಾಗೂ ಲೈಂಗಿಕ ಥೆರಪಿ, ಎಚ್ ಐವಿ/ಏಡ್ಸ್ ಶಿಕ್ಷಣ, ಗ್ರಾಮೀಣ ಸಂಶೋಧನಾ ವಿಧಾನ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಮಾನಸಿಕ ಆರೋಗ್ಯದಲ್ಲಿ ವಿಷಯಗಳಲ್ಲಿ ಬೆಂಗಳೂರು, ಹೈದ್ರಾಬಾದ್, ಮುಂಬೈ, ಮೈಸೂರು ಹೀಗೆ ವಿವಿಧೆಡೆ ತರಬೇತಿ ಪಡೆದಿದ್ದಾರೆ. ‘ಕಾಲೇಜು ವಿದ್ಯಾರ್ಥಿಗಳ ಬಡತನ ಹಾಗೂ ವ್ಯಕ್ತಿತ್ವ ವಿಕಸನ’ ಎಂಬುದು ಇವರ ಪಿಎಚ್ ಡಿ ವಿಷಯ. ...

READ MORE

Related Books