ಸಮಯವನ್ನು ಕೊಲ್ಲಬೇಡಿ ಪ್ಲೀಸ್

Author : ಆರ್. ಶ್ರೀನಾಗೇಶ್

Pages 152

₹ 150.00




Year of Publication: 2018
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ಸಮಯವನ್ನು ಕೊಲ್ಲಬೇಡಿ ಪ್ಲೀಸ್’ ಲೇಖಕ ಆರ್. ಶ್ರೀನಾಗೇಶ್ ಅವರ ಕೃತಿ. ಸಮಯ ನಮಗೆ ಪ್ರಕೃತಿ ದತ್ತವಾದ ಅದ್ಬುತ ಕೊಡುಗೆ. ಯಾವುದೇ ಭೇದ ಭಾವ ಇಲ್ಲದೇ, ಒಂದು ದಿನವೂ ತಪ್ಪದೇ, ಅನುದಿನವೂ 24 ತಾಸು ನಮ್ಮ ಖಾತೆಗೆ ಜಮೆ ಆಗುತ್ತದೆ. ನಮಗಿರುವ ಕೆಲಸಗಳನ್ನು ವಿಂಗಡಿಸಿಕೊಂಡು ಕ್ರಿಯಾಶೀಲರಾಗಿ ಸಮಯವನ್ನು ಬಳಸಿಕೊಳ್ಳುವುದು ಸಾಧಕರ ಲಕ್ಷಣ. ಹಾಗಾಗಿ, ಸಮಯದ ಮಹತ್ವವೇನು, ಸಮಯವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೃತಿ ನೀಡುತ್ತದೆ.

About the Author

ಆರ್. ಶ್ರೀನಾಗೇಶ್

ವಿಮಾ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಆರ್‌ ಶ್ರೀನಾಗೇಶ್‌ ಅವರಿಗೆ ಬರವಣಿಗೆ ಹವ್ಯಾಸ. ೧೯೬೯ರಿಂದ ಅವರ ಬರವಣಿಗೆಯ ಸಾಹಸ ಮುಂದುವರಿದಿದೆ. ವಿದ್ಯಾರ್ಥಿಗಳ ಗಣಿತ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಅವರು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಸಲ್ಲಿಸಿದ ಸೇವೆ ಅನುಪಮವಾದುದು.  ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರರಾದ ನಾಗೇಶ್‌ ವಿಮೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಡಿಪ್ಲೊಮ ಮತ್ತು ಆಪ್ತ ಸಲಹಾ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1995 ರಿಂದ ನಾಡಿನ ಹಲವೆಡೆ ಮಕ್ಕಳಿಗೆ, ಶಿಕ್ಷಕರಿಗೆ, ಪೋಷಕರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸ್ವಯಂ ನಿರ್ವಹಣಾ ...

READ MORE

Related Books