ಸಂಬಂಧಕೀಯ

Author : ಶ್ರೀನಿವಾಸ ಜೋಕಟ್ಟೆ

Pages 86

₹ 90.00




Year of Publication: 2015
Published by: ಹೆಚ್‌ ಬಿ ಎಲ್‌ ರಾವ್‌
Address: ಕನ್ನಡ ಸಾಹಿತ್ಯ ಪರಿಷತ್ತು ಮುಂಬೈ ಘಟಕ, ಮನುಶೃತಿ, ವಶಿ, ನವಿಮುಂಬೈ

Synopsys

ಪ್ರಸ್ತುತ ಅವರ ಈ ಕೃತಿ ಸ್ನೇಹಸಂಬಂಧ'ದಲ್ಲಿ ಪ್ರಕಟವಾದ ಸಂಪಾದಕೀಯ ಬರಹಗಳು, ಸಂಪಾದಕೀಯ ಬರಹಗಳ ಶೈಲಿಯೂ ವಿಶಿಷ್ಟವಾದುದು. ಅಲ್ಲಿ ಆಯ್ದುಕೊಂಡ ವಿಷಯಕ್ಕೆ ಚಿಂತನೆಯ ಧ್ವನಿ ಇರದಿದ್ದರೆ ಅದು ಶುಷ್ಕ ಬರಹವಾಗಬಲ್ಲುದು. ವ್ಯಾಪ್ತಿಯಲ್ಲಿ ಪುಟಗಳ ಮಿತಿಯಲ್ಲಿ ಸಮಗ್ರತೆಯತ್ತ ಧ್ವನಿಪೂರ್ಣತೆಯನ್ನು ಸಮ ಧೋರಣೆಯತ್ತ ಒಳಗೊಳ್ಳ ಬೇಕಾಗುತ್ತದೆ. ಒಂದು ಸಂಘದ ಪತ್ರಿಕೆ ಎಂದಾಕ್ಷಣ ಅಲ್ಪನ ಬಿಂಬಿಸುವುದರ ಸಂಪಾದಕೀಯ ಬರಹಗಳಿಗೆ ಮಿತಿಯೂ ಇರುತ್ತದೆ. ಸಮಕಾಲೀನತೆಯನ್ನು ಜತೆಗೆ ಸಾರ್ವಕಾಲಿಕತೆಯನ್ನು ಕೂಡಾ ಒಳಗೊಳ ಬೇಕಾಗುತ್ತದೆ. ಇದು ಇಲ್ಲಿನ ಸಂಪಾದಕೀಯ ಬರಹಗಳಲ್ಲಿ ಜೋಕಟ್ಟೆಯವರಿಗೆ ಸಾಧ್ಯವಾಗಿದೆ. ಇವರ ಸರಳ, ಪ್ರದ್ಯ ಶೈಲಿ ಆಕರ್ಷಕವೂ ಆಗಿದೆ. ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಸಾಮಾಜಿಕ ಚಿಂತನೆ ಹೀಗೆ ಅದರ ವ್ಯಾಪ್ತಿ ವಿಶಾಲವಾದದ್ದು, ಪತ್ರಕರ್ತನಾಗಿದ್ದರಿಂದ ಇವರಿಗೆ ಜೀವನವನ್ನು ಅದರ ಎಲ್ಲ ಕೋನಗಳಲ್ಲಿ ಗ್ರಹಿಸಿ ಸೃಜಿಸುವ ಶಕ್ತಿಯೂ ಇದೆ. ಈ ಎಲ್ಲ ಗುಣಗಳು ಇಲ್ಲಿನ ಸಂಪಾದಕೀಯ ಬರಹಗಳಲ್ಲಿ ಕಾಣಬಹುದು. ಇವರಿಗೆ ಶುಭ ಹಾರೈಕೆಗಳು ಡಾ. ಭರತ್‌ ಕುಮಾರ್ ಪೊಲಿಪು

About the Author

ಶ್ರೀನಿವಾಸ ಜೋಕಟ್ಟೆ

ಸಾಹಿತಿ, ಪತ್ರಕರ್ತ 'ಶ್ರೀನಿವಾಸ ಜೋಕಟ್ಟೆ’ ಅವರು 1964 ಜುಲೈ 4 ಮಂಗಳೂರು ಜೋಕಟ್ಟೆಯಲ್ಲಿ ಜನಿಸಿದರು. ಪ್ರಸ್ತುತ ಮುಂಬಯಿ ನಗರದಲ್ಲಿ ವಾಸವಿದ್ದು, ಕನ್ನಡದ ದಿನಪತ್ರಿಕೆ 'ಕರ್ನಾಟಕ ಮಲ್ಲ'ದ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಜೋಶ್ರೀ', 'ಶ್ರೀಜೋ', ಎಂಬ ಕಾವ್ಯನಾಮದಿಂದಲೂ ಬರೆಯುತ್ತಿದ್ದಾರೆ. ಪ್ರವೃತ್ತಿಯಲ್ಲಿ ಬರಹಗಾರರಾಗಿಯೂ ಗುರುತಿಸಿಕೊಂಡಿರುವ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಹಿಮವರ್ಷ, ಊರಿಗೊಂದು ಆಕಾಶ, ಒತ್ತಿ ಬರುವ ಕತ್ತಲ ದೊರೆಗಳು. ಇವರ ಗದ್ದರ್‌ ಕವನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಕ್ಕೆ ಆಯ್ಕೆಯಾಗಿದೆ.  ...

READ MORE

Related Books