ಸಂಪನ್ನರು

Author : ರವೀಂದ್ರ ಭಟ್ಟ

Pages 191

₹ 94.00




Year of Publication: 2011
Published by: ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
Address: ಮೈಸೂರು

Synopsys

ರವೀಂದ್ರ ಭಟ್ಟ ಅವರ ಅಂಕಣ ಬರಹಗಳ ಸಂಗ್ರಹ ‘ಸಂಪನ್ನರು’. ಕುಲಪತಿಗಳು ಕೆ.ಎಸ್.ರಂಗಪ್ಪ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಅವರು ಹೇಳುವಂತೆ ವಿವಿಧ ವ್ಯಕ್ತಿಗಳ, ವಿಷಯಗಳ ಸಂಗ್ರಹವೇ ಈ ಕೃತಿ. ಸಂಕಣ ಬರಹಗಳ ಹೆಸರಿನಲ್ಲಿ ಸಿದ್ಧಗೊಂಡ ಈ ಬರಹಗಳು ಒಂದು ಇತಿಮಿತಿಯಲ್ಲಿ ಅನಾವರಣಗೊಂಡಿದ್ದು, ದೊಡ್ಡ ಚಿಂತನೆಗೆ ಹಾಗೂ ಓದಿಗೆ ಅವಕಾಶ ಮಾಡಿಕೊಡುವಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಕೃತಿಯ ಪರಿವಿಡಿಯಲ್ಲಿ ರಾಬಟ್ ಮಂಡೆಲ್, ವಿಧಾನಸೌಧ ಕನ್ನಡಮಯ ಆಗಬೇಕು -ದೇಜಗೌ, ನಿಂಜಲಿಂಗಪ್ಪ, ಇದು ಸತ್ಯನ್, ಒಂದು ನಗು...ನೂರಾರು ನೆನಪು..ಅಪ್ಪಟ ದೇಸೀ ಪ್ರತಿಭೆ, ಮಾನವತಾವಾದಿ ಡಿವಿಕೆ ಮೂರ್ತಿ, ಹೆಮ್ಮೆಯ ವಿಜ್ಞಾನಿ ಡಾ.ವಿ.ಪ್ರಕಾಶ್, ದೂರಶಿಕ್ಷಣದ ವಿಜ್ಞಾನ: ನನ್ನ ಕನಸು ಸೇರಿದಂತೆ 62 ಶೀರ್ಷಿಕೆಗಳ ಅಂಕಣ ಬರಹಗಳು ಈ ಕೃತಿಯಲ್ಲಿವೆ.

About the Author

ರವೀಂದ್ರ ಭಟ್ಟ
(07 July 1967)

ರವೀಂದ್ರ ಭಟ್ಟ ಅವರು ಪ್ರಸ್ತುತ `ಪ್ರಜಾವಾಣಿ’ಯ ಕಾರ್ಯ ನಿರ್ವಾಹಕ ಸಂಪಾದಕರು.  ಅವರ ಊರು ಉತ್ತರ ಕನ್ನಡ ಜಿಲ್ಲೆಯ ಐನಕೈ. ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅವರ ಬದುಕು ಹಾಗೂ ಬರಹಗಳಲ್ಲಿ ಮಾನವೀಯ ಅಂತಃಕರಣವೇ ಪ್ರಧಾನ. `ಸಂಯುಕ್ತ ಕರ್ನಾಟಕ’ದ ಮೂಲಕ ಪತ್ರಿಕಾರಂಗ ಪ್ರವೇಶಿಸಿದ ಅವರಿಗೆ ಕರ್ನಾಟಕ ಸರ್ಕಾರದ ``ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’’ ಪುರಸ್ಕೃತರು. `ಮೂರನೇ ಕಿವಿ’ ಪುಸ್ತಕ ಅವರ ಐದನೇ ಕೃತಿ. ...

READ MORE

Related Books