ಸಾಮ್ರಾಜ್ಯ ಪತನ

Author : ಕೊರಟಿ ಶ್ರೀನಿವಾಸರಾವ್

₹ 2300.00




Year of Publication: 2012
Published by: ಲೇಖಕಿಯರ ವೇದಿಕೆ
Address: ಬೆಂಗಳೂರು

Synopsys

ಲೇಖಕ ಕೊರಟಿ ಶ್ರೀನಿವಾಸರಾವ್ ಅವರ ನಾಲ್ಕು ಕೃತಿಗಳ ಸಂಪುಟ-ಸಾಮ್ರಾಜ್ಯ ಪತನ.ಸಾಮ್ರಾಜ್ಯೋದಯ, ಸಾಮ್ರಾಜ್ಯ ವೈಭವ, ಸಾಮ್ರಾಜ್ಯ ದುರಂತ ಹಾಗೂ ಸಾಮ್ರಾಜ್ಯ ಪತನ. ಇವೆಲ್ಲವೂ ವಿಜಯನಗರದ ಸಾಮ್ರಾಜ್ಯ ಕುರಿತಾಗಿವೆ. ತುಂಬಾ ವಿಸ್ತೃತ ಅಧ್ಯಯನದ ಪ್ರತೀಕವಾಗಿರುವ ಈ ಸಂಪುಟಗಳು ಐತಿಹಾಸಿಕ ಅಧ್ಯಯನಕ್ಕೆ ಉತ್ತಮ ಆಕರ ಗ್ರಂಥಗಳಾಗಿಯೂ ಗಮನ ಸೆಳೆಯುತ್ತವೆ.

About the Author

ಕೊರಟಿ ಶ್ರೀನಿವಾಸರಾವ್
(19 October 1925 - 25 April 1983)

ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು. ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ...

READ MORE

Related Books