ಸಂಶೋಧನ ಪ್ರಸ್ತಾವ

Author : ಎಂ. ಚಂದ್ರ ಪೂಜಾರಿ

Pages 414

₹ 150.00




Year of Publication: 2005
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಪುಸ್ತಕದಲ್ಲಿ ವರ್ಣ, ಜಾತಿ, ವರ್ಗ, ಲಿಂಗ ಮತ್ತು ಜಾಗತಿಕ ಸಂದರ್ಭ ಗಳಲ್ಲಿ ಇವುಗಳ ಸಂಬಂಧವನ್ನು ವಿವರಿಸಲಾಗಿದೆ. ದಲಿತರ ಆಲೋಚನಾಕ್ರಮ, ಲೋಕದೃಷ್ಟಿ ಮತ್ತು ಅವುಗಳಿಂದ ನಿರ್ಮಾಣಗೊಂಡ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ. ಪರಂಪರಾಗತವಾದ ದಲಿತ ಸಮಾಜವು ಆಧುನಿಕ ಸನ್ನಿವೇಶದಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹೊಸ ಆಯಾಮಗಳನ್ನು ಪಡೆಯುವ ಸಂಗತಿಗಳನ್ನು, ಸಾಧ್ಯತೆಗಳನ್ನು ಮತ್ತು ಅವುಗಳಿಗಿರುವ ಆತಂಕಗಳನ್ನು ಇಲ್ಲಿನ ಲೇಖನಗಳು ಓದುಗರೊಡನೆ ಚರ್ಚಿಸುತ್ತವೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ವರ್ಣ-ಜಾತಿ-ವರ್ಗ-ಲಿಂಗ-ಜಾಗತಿಕ ಸಂದರ್ಭ ,ದಲಿತ ಚಿಂತನ , ದಲಿತ ಸಾಹಿತ್ಯ ಮತ್ತು ಸಂಸ್ಕೃತಿ , ದಲಿತ ಚಳುವಳಿ ಮತ್ತು ಸಮಕಾಲೀನತೆ.

About the Author

ಎಂ. ಚಂದ್ರ ಪೂಜಾರಿ

ಕರ್ನಾಟಕದ ಪ್ರಮುಖ ರಾಜಕೀಯ ಹಾಗೂ ಅಭಿವೃದ್ಧಿ ಚಿಂತಕರಾಗಿರುವ ಎಂ.ಚಂದ್ರಪೂಜಾರಿ ಅವರು ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಂಶೋಧನೆ: ಏನು? ಏಕೆ? ಹೇಗೆ?, ಸಮಾಜ ಸಂಶೋಧನೆ, ಸಂಶೋಧನ ಜವಾಬ್ದಾರಿ, ಸಂಶೋಧನ ಪ್ರಸ್ತಾವ, ದೇಶೀಯತೆ ನೆರಳಲ್ಲಿ ವಿಕೇಂದ್ರೀಕರಣ, ಜಂಟಿ ಅರಣ್ಯ ಯೋಜನೆ, ಅಭಿವೃದ್ಧಿ ಮತ್ತು ರಾಜಕೀಯ, ರಾಜಕೀಯದ ಬಡತನ, ಬಡತನ ಮತ್ತು ಪ್ರಜಾಪ್ರಭುತ್ವ- ಇವರ ಪ್ರಮುಖ ಕೃತಿಗಳು. ...

READ MORE

Related Books