ಸಂಸ್ಕೃತ ಕವಿಗಳ ಕಾವ್ಯ ಮೀಮಾಂಸೆ

Author : ಶತಾವಧಾನಿ ಆರ್. ಗಣೇಶ

Pages 176

₹ 195.00




Year of Publication: 2020
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ

Synopsys

ಖ್ಯಾತ ವಿದ್ವಾಂಸ ಶತಾವಧಾನಿ ಡಾ. ಆರ್. ಗಣೇಶ ಅವರ ಕೃತಿ-ಸಂಸ್ಕೃತ ಕವಿಗಳ ಕಾವ್ಯ ಮೀಮಾಂಸೆ. ಸಂಸ್ಕೃತ ಕವಿಗಳಾದ ವ್ಯಾಸ, ಕಾಳಿದಾಸ, ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಕವಿಗಳ ಬೃಹತ್ ಗ್ರಂಥಗಳನ್ನು ವಿಶೇಷವಾಗಿ ಕಾವ್ಯಗಳನ್ನು ಮೀಮಾಂಸೆಗೆ ಆಯ್ಕೆ ಮಾಡಿಕೊಂಡಿದ್ದು, ಲೇಖಕರ ಈ ಪ್ರಯತ್ನ ವಿನೂತನವಾಗಿದೆ. ಪ್ರಾಚೀನ ಸಂಸ್ಕೃತ ಕಾವ್ಯಗಳು ಇಡೀ ಜೀವನವನ್ನು ಪ್ರತಿನಿಧಿಸುತ್ತವೆ. ಒಂದು ವೇಳೆ ಬದುಕಿನ ಒಂದು ಭಾಗವನ್ನು ವಿಶ್ಲೇಷಿಸುತ್ತಿದ್ದರೂ ಅದು ಇಡೀ ಬದುಕಿನ ಭಾಗವೇ ಆಗಿರುತ್ತದೆ.ಈ ಕಾರಣಕ್ಕಾಗಿಯೇ ಇಂತಹ ಸಾಹಿತ್ಯವು ಉತ್ಕೃಷ್ಟವಾಗಿರುತ್ತವೆ. ಒಂದು ಕಾವ್ಯವನ್ನು ಮೀಮಾಂಸೆಗೆ ಸ್ವೀಕರಿಸುವುದು, ಅದನ್ನು ವಿಶ್ಲೇಷಿಸುವ ದೃಷ್ಟಿಕೋನ ಇತ್ಯಾದಿ ಹೇಗಿರಬೇಕು ಎಂಬುದಕ್ಕೆ ಈ ಕೃತಿಯು ಉತ್ತಮ ಮಾದರಿ ಒದಗಿಸುತ್ತದೆ.

About the Author

ಶತಾವಧಾನಿ ಆರ್. ಗಣೇಶ
(04 December 1962)

ಶತಾವಧಾನಿ ಗಣೇಶ ಅವರು ಉತ್ತಮ ವಾಗ್ಮಿಗಳು. ವಿದ್ವಾಂಸರು. ಅವಧಾನ ಕಲೆಯನ್ನು ರೂಢಿಸಿಕೊಂಡವರು. “ಕನ್ನಡದಲ್ಲಿ ಅವಧಾನ ಕಲೆ” ಎಂಬ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪ್ರಪ್ರಥಮ ಡಿ.ಲಿಟ್. ಪದವಿ ನೀಡಿ ಗೌರವಿಸಿದೆ. ಪ್ರಸ್ತುತ ಭಾರತೀಯ ವಿದ್ಯಾಭವನದ ಬೆಂಗಳೂರು ಶಾಖೆಯ ಸಂಸ್ಕೃತ ವಿಭಾಗದ ನಿರ್ದೇಶಕರಾಗಿದ್ದಾರೆ. ಆರ್.ಶಂಕರನಾರಾಯಣ ಅಯ್ಯರ್ ಹಾಗೂ ಅಲಮೇಲಮ್ಮ ದಂಪತಿಯ ಪುತ್ರರು.04-12-1962ರಂದು ಕೋಲಾರದಲ್ಲಿ ಜನನ. ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ (UVCE), ದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರರು. ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ ನಲ್ಲಿ ಮೆಟೀರಿಯಲ್ ಸೈನ್ಸ್ ಹಾಗೂ ಮೆಟಲರ್ಜಿಯಲ್ಲಿ ಎಂ.ಎಸ್ಸಿ. ಪದವೀಧರರು. ಮೈಸೂರ್ ವಿಶ್ವವಿದ್ಯಾಲಯದ ಅಡಿಯಲ್ಲಿ ...

READ MORE

Related Books