ಸಂಸ್ಕೃತ ನಾಟಕ

Author : ಎ.ಆರ್.  ಕೃಷ್ಣಶಾಸ್ತ್ರಿ

Pages 329




Year of Publication: 1937
Published by: ಮೈಸೂರು ವಿಶ್ವವಿದ್ಯಾಲಯ
Address: ಮೈಸೂರು

Synopsys

ಎ.ಆರ್. ಕೃಷ್ಣಶಾಸ್ತ್ರಿ ಅವರು ಬರೆದ ಕೃತಿ-ಸಂಸ್ಕೃತ ನಾಟಕ. ಕೃತಿಯ ಪ್ರಧಾನ ಸಂಪಾದಕರು-ಬಿ.ಎಂ. ಶ್ರೀಕಂಠಯ್ಯ. ಸಾಹಿತ್ಯಾಸಕ್ತರು ಮೊದಲು ಸಂಸ್ಕೃತ, ಗ್ರೀಕ್ ಹಾಗೂ ಇಂಗ್ಲಿಷ್ ಭಾಷೆಯ ನಾಟಕಗಳ ಬಗ್ಗೆ ತಿಳಿಯಬೇಕು ಎಂದು ಸಲಹೆ ನೀಡುವ ಪ್ರಧಾನ ಸಂಪಾದಕರು, ನಾಟಕದ ವಸ್ತು- ವಿಷಯ, ವಿಮರ್ಶೆ, ನಾಟಕದ ವಾಹಕ, ಆಕಾರ, ಸ್ವರೂಪ ಇತ್ಯಾದಿ ಕುರಿತು ಸುದೀರ್ಘವಾದ ಮುನ್ನುಡಿ ಬರೆದಿದ್ದು, ಅಧ್ಯಯನಪೂರ್ಣವಾಗಿದೆ.

ಲೇಖಕ ಎ.ಆರ್. ಕೃಷ್ಣಶಾಸ್ತ್ರಿ, ಸುಮಾರು 1ನೇ ಶತಮಾನ ಕಾಲದಿಂದಲೂ ಸಂಸ್ಕೃತ ಭಾಷೆಯಲ್ಲಿ ನಾಟಕಗಳನ್ನು ರಚಿಸಿರುವ ಇತಿಹಾಸವಿದೆ ಎಂದು ಹೇಳಿದ್ದು, ಕೃತಿಯಲ್ಲಿ ಸಂಸ್ಕೃತ ನಾಟಕದ ಸ್ವರೂಪ ಮತ್ತು ಉತ್ಪತ್ತಿ (ನಾಟ್ಯ ಲಕ್ಷಣ, ಭೇದ ಇತ್ಯಾದಿ) ಉಚ್ಛ್ರಾಯ ಕಾಲ (ಅಶ್ವಘೋಷ, ಭಾಸ, ಶೂದ್ರಕ, ಕಾಳಿದಾಸ, ವಿಶಾಖದತ್ತ ಇತ್ಯಾದಿ), ಮಧ್ಯಕಾಲ (ಹರ್ಷವರ್ಧನ, ಭವಭೂತಿ, ಭಟ್ಟ ನಾರಾಯಣ, ಕ್ಷೇಮೀಶ್ವರ, ಕೃಷ್ಣಮಿತ್ರ, ರಾಜಶೇಖರ ಇತ್ಯಾದಿ), ಕ್ಷೀಣಕಾಲ; ಈಚಿನ ರೂಪಕಗಳು ಮತ್ತು ಉಪರೂಪಕಗಳ ಬಗ್ಗೆ (ರಾಮಾಯಣ, ಭಾಗವತ, ಪೌರಾಣಿಕ, ಚರಿತ್ರೆ, ಧಾರ್ಮಿಕ, ಛಾಯಾ ವೇಗದ ನಾಟಕಗಳು ಹಾಗೂ ಸಂಕೀರ್ಣ ವೇಗದ ನಾಟಕಗಳು ಇತ್ಯಾದಿ) ಇಲ್ಲಿ ಚರ್ಚಿಸಲಾಗಿದೆ. ಭಾರತದಲ್ಲಿ ಬೆಳೆದು ಬಂದ ನಾಟಕಗಳ ಪರಂಪರೆಯನ್ನು ಈ ಕೃತಿ ಸಂಶೋಧನಾತ್ಮಕವಾಗಿ ಕಟ್ಟಿಕೊಡುತ್ತದೆ.

About the Author

ಎ.ಆರ್.  ಕೃಷ್ಣಶಾಸ್ತ್ರಿ
(12 February 1890 - 01 February 1968)

ಮಹಾಭಾರತವನ್ನು ಸರಳಗನ್ನಡದಲ್ಲಿ ಹೇಳುವ ವಚನ ಭಾರತದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಿರುವ ಎ.ಆರ್. ಕೃಷ್ಣಶಾಸ್ತ್ರಿಗಳು ಪ್ರಬುದ್ಧ ಕರ್ನಾಟಕ ಪತ್ರಿಕೆಯ ಸ್ಥಾಪಕರಾಗಿ, ಸಂಪಾದಕರಾಗಿ ನೀಡಿದ ಕೊಡುಗೆ ಅಮೂಲ್ಯ. 1890ರ ಫೆಬ್ರುವರಿ 12ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಅಂಬಳೆ ರಾಮಕೃಷ್ಣಶಾಸ್ತ್ರಿ ತಾಯಿ ವೆಂಕಮ್ಮ. ತಂದೆಯಿಂದ ಸಂಸ್ಕೃತ ವ್ಯಾಸಂಗ ಮಾಡಿದ ಶಾಸ್ತ್ರಿಗಳು ವೆಸ್ಲಿಯನ್ ಪ್ರೌಢಶಾಲೆಯಲ್ಲಿ ಶಿಕ್ಷಣ ಮುಗಿದ ಮೇಲೆ ಬಿ.ಎ. ಪದವಿ (1913)  ಮತ್ತು ಮದರಾಸಿನಲ್ಲಿ ಕನ್ನಡ ಎಂ.ಎ. (1915) ಪದವಿ ಪಡೆದರು. ಪ್ರಾರಂಭದಲ್ಲಿ ಡೆಪ್ಯೂಟಿ ಕಮೀಷನರ್ ಆಫೀಸಿನಲ್ಲಿ ಅನಂತರ ಓರಿಯಂಟಲ್ ಲೈಬ್ರರಿಯಲ್ಲಿ ಕೆಲಸ ಮಾಡಿದ ಅವರು ನಂತರ 1916ರಲ್ಲಿ ಸೆಂಟ್ರಲ್ ...

READ MORE

Related Books