ಸಮುಚ್ಚಯ

Author : ಎಂ. ರಾಮಚಂದ್ರ

Pages 192

₹ 80.00




Year of Publication: 2007
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಇಲ್ಲಿನ ಬರಹಗಳು ಡಿ.ವಿ.ಜಿ, ಬೇಂದ್ರೆ, ವಿಸೀ, ಕಾರಂತ, ಕೊಳಂಬೆ, ಇನಾಂದಾರ್, ನಿಸಾರ್, ಇವರ ಕೃತಿಗಳನ್ನು ಕುರಿತು ಹೊಸ ಸನ್ನಿವೇಶವೊಂದನ್ನು ನಿರ್ಮಾಣ ಮಾಡುತ್ತದೆ. ಕವಿ ಮತ್ತು ಕಾವ್ಯ ಕುರಿತು ಸೂಕ್ಷ್ಮ ಅವಲೋಕನದ ಬರಹಗಳು ಸಮುಚ್ಚಯದ ಸೊಗಸನ್ನು ಹೆಚ್ಚಿಸಿವೆ. ಪದ್ಯಗದ್ಯಗಳ ಸರಸ ದಾಂಪತ್ಯದ ಸೊಗಸಿನ ಪ್ರಬಂಧದ ವಿಶಿಷ್ಟ ಶೈಲಿಯು ಈ ಕೃತಿಯಲ್ಲಿದೆ. ಈ ಸಂಕಲನದಲ್ಲಿ ಅಡಕವಾಗಿರುವ ಅಧ್ಯಾಯಗಳೆಂದರೆ: ಪಂಜೆ ಮತ್ತು ಪಡುಕೋಣೆ ಪ್ರಬಂಧ ಸಾಹಿತ್ಯ, ಗೋವಿಂದ ಪೈಯವರ ಕಾವ್ಯಲೋಕ , ಡಿ.ವಿ.ಜಿ. ವಾಹ್ಮಯ: ಧರ್ಮ, ತತ್ವ; ಬೇಂದ್ರೆ ಕಾವ್ಯದಲ್ಲಿ ಹಾಸ್ಯ , ವಿ.ಸೀ ಎರಡು ಸ್ಮತಿಚಿತ್ರಗಳು , ಕಾರಂತರ 'ಚೋಮನ ದುಡಿ'; ಇನಾಂದಾರರ ಕಾದಂಬರಿಗಳು: ಜೀವನ ದೃಷ್ಟಿ , ಕೊಳಂಬೆಯವರ ಕಾವ್ಯ; 'ಗುಣಕ್ಕೆ ಕೈ ಮುಗಿದ' ಕವಿ ನಿಸಾರ್ , ನೆಹರೂಜಿಯವರ ಬರವಣಿಗೆ ,ಮಹಾಭಾರತದಲ್ಲಿ ಪರಿಭ್ರಮಣ , ಕಾವ್ಯ ಕನ್ನಿಕೆಯ ಅಲಂಕಾರ , ದೇಸಿ ಸಾಹಿತ್ಯದಲ್ಲಿ ವಿನೋದ , ದೀಪಾವಳಿ: ಕನ್ನಡ ಕವಿಗಳ ಕಣ್ಣಲ್ಲಿ ಪಡುಕೋಣೆ ಮುಂತಾದ ಅಧ್ಯಾಯಗಳನ್ನಯ ಒಳಗೊಂಡಿದೆ. 

About the Author

ಎಂ. ರಾಮಚಂದ್ರ

ಎಮ್. ರಾಮಚಂದ್ರ ಅವರು 30 ವರ್ಷಕ್ಕಿಂತಲೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ , ಕಾಲೇಜಿನ ಸಾಹಿತ್ಯ ಸಂಘದ ಅಧ್ಯಕ್ಷರಾಗಿ , ವಿಚಾರ ಸಂಕಿರಣ, ಕವಿಗೋಷ್ಠಿ, ಹೀಗೆ ಹಲವಾರು ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಿದ್ಧಾರೆ. ಕಾರ್ಕಳದಲ್ಲಿ 1997ರಲ್ಲಿ ಸಾಹಿತ್ಯ ಸಂಘ ಸ್ಥಾಪಿಸಿದ್ದಾರೆ. ಬಾಡದ ಹೂಗಳು, ನೆನಪಿನ ಸುರಗಿ, ಚಿತ್ರ ಚರಿತ್ರೆ, ಇವರ ಪ್ರಮುಖ ಪುಸ್ತಕಗಳು. ’ಸೇಡಿಯಾಪು ಕೃಷ್ಣಭಟ್ಟರ ಪತ್ರಾವಳಿ’ ಇವರ ಸಂಪಾದಿತ ಕೃತಿಯಾಗಿದೆ.  ...

READ MORE

Related Books