ರಾಜ್ಯ ಮಹಿಳಾ ವಿವಿ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿರುವ ಡಾ. ಆರ್. ಸುನಂದಮ್ಮ ಅವರ ಹೆಣ್ಣು ಕಣ್ಣೋಟದ ವಿಮರ್ಶಾ ಲೇಖನಗಳನ್ನು ಈ ಕೃತಿಯೂ ಒಳಗೊಂಡಿದ್ದು, ಇದು ಇವರ ದ್ವಿತೀಯ ವಿಮರ್ಶಾ ಕೃತಿಯಾಗಿದೆ. ಇಲ್ಲಿರುವ 18 ಪ್ರಬಂಧಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ಗುಂಪು ಮಹಿಳೆಯ ಬದುಕಿನ ಬಹುಮುಖಿ ನಲೆಗಳನ್ನು ರೂಪಿಸಿದ, ಪ್ರಭಾವಿಸಿದ, ನಿಯಂತ್ರಿಸಿದ ಹಾಗೂ ನಿರ್ದೇಶಿಸಿದ ಸಮಾಜದ ವಿವಿಧ ಶಕ್ತಿಕೇಂದ್ರಗಳ ಉದ್ದೇಶ ಮತ್ತು ತಾತ್ವಿಕತೆಯ ಚರ್ಚೆಗೆ ಮೀಸಲಾದ ಲೇಖನಗಳಾಗಿವೆ. ಎರಡನೆಯದು ಜನಪದ ಕಾವ್ಯ, ನಡುಗನ್ನಡದ ಸಾಹಿತ್ಯವನ್ನು ಸ್ತ್ರೀವಾದಿ ನೆಲೆಯಿಂದ ವಿಶ್ಲೇಷಿಸುವ ಲೇಖನಗಳಾಗಿದೆ. ಉತ್ತರಾದೇವಿ ಯನ್ನು ಸ್ವಾಗತಿಸುತ್ತಾ ಸಂಗಾತಿ ಬಾರೇ ಸಾಧು ಮಣಿಯೇ ಬಾರೆ, ಸಂಗಾತಿ ಸೋತರ ಅಂಗೈಯಲ್ಲಿ ಮಡಿಗೇನು ಜಂಬು ನೇರಳ ತಿನಿಸೇನು ಸಂಗಾತಿ ನಿನ್ನ ರೂವ್ವ ಬರಸೇನು ಎಂದು ಭರವಸೆ ನೀಡುತ್ತಾಳೆ. ಆ ಭರವಸೆ ಹೆಣ್ಣು ಸಕಲ ಕುಲಕ್ಕೆ ನೀಡುವ ಭರವಸೆಯಾಗಿ, ಪದವನ್ನು ಪುಸ್ತಕದಲ್ಲಿ ಪ್ರಸ್ತಾಪಿಸಲಾಗಿದೆ. ಮಹಿಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿ ಕೊಂಡಿದ್ದಾಳೆ. ಮತ್ತು ಅವಳು ನೋಡುವ ಸಮಾಜ ಮತ್ತು ಅವಳನ್ನು ನೋಡುವ ಸಮಾಜ ಎರಡನ್ನೂ ಈ ಕೃತಿಯಲ್ಲಿ ಮುಖಾಮುಖಿ ಗೊಳಿಸಲಾಗಿದೆ. ಹೇಗೆ ನಂಬಿಕೆಗಳು ನಿಧಾನಕ್ಕೆ ಮಹಿಳೆಯ ಶೋಷಣೆಗಳಿಗೆ ಬಳಕೆಯಾಗತೊಡಗಿತು ಎನ್ನುವುದನ್ನು ಜಾಗತಿಕ ಆಚಾರ, ವಿಚಾರಗಳನ್ನಿಟ್ಟುಕೊಂಡು ಈ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಆರ್.ಸುನಂದಮ್ಮ ಅವರು ಹುಟ್ಟಿದ್ದು 1960 ಆಗಸ್ಟ್ 22ರಂದು. ಮೂಲತಃ ಕೋಲಾರ ಜಿಲ್ಲೆ ವೆಂಕಟಾಪುರದವರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮ ಸಂಯೋಜಕಿ ಪ್ರಶಸ್ತಿ ದೊರೆತಿದೆ. ದ್ವಿತ್ವ, ಲೇಬರ್ ವಾರ್ಡಿನಲ್ಲೊಂದು ದಿನ ಇತರೆ, ಜನಪದ ಸಾಹಿತ್ಯದಲ್ಲಿ ಮಹಿಳಾ ಜಗತ್ತು ಇವರ ಪ್ರಮುಖ ಕೃತಿಗಳು. ...
READ MORE