ಸಂಘರ್ಷದೆಡೆಗೆ

Author : ಸಿದ್ಧಲಿಂಗ ಪಟ್ಟಣಶೆಟ್ಟಿ

Pages 136

₹ 100.00




Year of Publication: 2015
Published by: ಅನನ್ಯ ಪ್ರಕಾಶನ, ಧಾರವಾಡ
Address: ಹೂಮನೆ, ಶ್ರೀದೇವಿನಗರ, ವಿದ್ಯಾಗಿರಿ, ಧಾರವಾಡ-580004
Phone: 94488 61604

Synopsys

ಡಾ. ವಿಶ್ವನಾಥ್ ಪ್ರಸಾದ್ ತಿವಾರಿ ಪ್ರಸಿದ್ಧ ಹಿಂದೀ ಕವಿ, ವಿಮರ್ಶಕರು. ಗಾಢ ಜೀವನಾನುಭವ ಮತ್ತು ಅಧ್ಯಯನದ ಹಿನ್ನೆಲೆ ಅವರ ಕಾವ್ಯದಲ್ಲಿದೆ, ಸಾವು ದುರಂತಗಳ ಎದುರು ಸೆಣಸಾಡುವ, ಕತ್ತಲೆ
ಬೆಳಕುಗಳ ಮಧ್ಯೆ ಹೋರಾಡುವ ಮನುಷ್ಯನ ಚಿತ್ರಗಳು, ಆಗೋಚರ ಶಕ್ತಿಯಲ್ಲಿಯೂ ಮನುಷ್ಯತ್ವದ ಭಾವವನ್ನು ಅರಸುವ  ಕಳಕಳಿ ಅವರ ಕವಿತೆಗಳ ಮೂಲ ಧಾತು. ತಿವಾರಿಯವರು
ತಾಯಿಯ ಬಗ್ಗೆ ರಚಿಸಿದ ಕವಿತೆಗಳು ತುಂಬ ಆದ್ರ್ರವಾಗಿವೆ.

ಕನ್ನಡದ ಪ್ರಸಿದ್ಧ ಕವಿ ಹಾಗೂ ಅನುವಾದಕರಲ್ಲಿ ಒಬ್ಬರಾದ ಡಾ. ಸಿದ್ಧಲಿಂಗಪಟ್ಟಣ ಶೆಟ್ಟಿ ಇದನ್ನು ಕನ್ನಡಕ್ಕೆ ತಂದಿದ್ದಾರೆ. ಒಟ್ಟು 75 ಅನುವಾದಿತ ಕವಿತೆಗಳು ಇಲ್ಲಿವೆ. ’ಭಾಷಾಪ್ರಯೋಗ, ಅಭಿವ್ಯಕ್ತಿಯ ವಿಷಯದಲ್ಲಿ ಅವರು ವಹಿಸುವ ಮುತುವರ್ಜಿಗೆ ನಿದರ್ಶನ ಈ 'ಸಂಘರ್ಷದಡೆಗೆ' ಎಂಬ ಮೆಚ್ಚುಗೆಗೂ ಕೃತಿ ಪಾತ್ರವಾಗಿದೆ. 

About the Author

ಸಿದ್ಧಲಿಂಗ ಪಟ್ಟಣಶೆಟ್ಟಿ
(03 November 1939)

ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು  ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...

READ MORE

Related Books