ಸಂಗೊಳ್ಳಿ ರಾಯಣ್ಣ

Author : ಬಸವರಾಜ ಕಟ್ಟೀಮನಿ

Pages 102

₹ 15.00




Year of Publication: 1973
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಸಂಗೊಳ್ಳಿ ರಾಯಣ್ಣ'  ಜೀವನಚರಿತ್ರೆಯ ಈ ಪುಸ್ತಕವನ್ನು ಲೇಖಕ ಬಸವರಾಜ ಕಟ್ಟೀಮನಿ ಅವರು ರಚಿಸಿದ್ದಾರೆ. ವೀರ ರಾಣಿ ಕಿತ್ತೂರು ಚೆನ್ನಮ್ಮನ ನಿಷ್ಠ ಬಂಟ. ಜನಸಾಮಾನ್ಯರ ಮಧ್ಯೆದಿಂದ ಮೂಡಿಬಂದ ಸ್ವಾತಂತ್ರ್ಯವೀರ. ಬ್ರಿಟಿಷ್ ಸೈನ್ಯಕ್ಕೆ, ಅಧಿಕಾರಿಗಳಿಗೆ ದಿಗ್ಬ್ರಮೆ ಹಿಡಿಸಿ, ಕಡೆಗೆ ದ್ರೋಹಕ್ಕೆ ಬಲಿಯಾದ ಹುತಾತ್ಮ ಸಂಗೊಳ್ಳಿ ರಾಯಣ್ಣ ಎಂದು ಈ ಪುಸ್ತಕದಲ್ಲಿ ರಾಯಣ್ಣನ ಬದುಕನ್ನು ವಿವರಿಸಲಾಗಿದೆ. ಸಂಗೊಳ್ಳಿ ರಾಯಣ್ಣನ ಬದುಕಿನ ವಿವಿಧ ಆಯಾಮಗಳು, ಬಾಲ್ಯ ಜೀವನ, ಕಿತ್ತೂರು ರಾಣಿಯ ಸೇವಕನಾಗಿ ನಿಂತ ಬಗೆ, ಬ್ರಿಟಿಷರಿಗೆ ಸಿಂಹಸ್ವಪ್ನವಾದ ರೀತಿ, ಕೊನೆಯ ದಿನಗಳು, ಮೋಸಕ್ಕೆ ಬಲಿಯಾಗಿ ಹುತ್ಮಾನಾದ ಸನ್ನಿವೇಶಗಳು ಹೀಗೆ ರಾಯಣ್ಣನ ಬದುಕಿನ ಚಿತ್ರಗಳನ್ನು ಸರಳ ಕನ್ನಡದಲ್ಲಿ ಈ ಕೃತಿಯಲ್ಲಿ ಲೇಖಕರು ಚಿತ್ರಿಸಿದ್ದಾರೆ.

About the Author

ಬಸವರಾಜ ಕಟ್ಟೀಮನಿ
(05 October 1919 - 23 October 1989)

ಬಸವರಾಜ ಕಟ್ಟೀಮನಿಯವರು ಬದುಕು ಹಾಗೂ ಸಾಹಿತ್ಯದಲ್ಲೂ  ಕ್ರಾಂತಿಕಾರಿಯಾಗಿದ್ದರು. 1919 ಅಕ್ಟೋಬರ್‌ 5 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಲಾಮರಡಿ ಗ್ರಾಮದಲ್ಲಿ ಜನಿಸಿದರು. ಅವರ ಮೊದಲ ಕಥೆ ’ಕಾರವಾನ್’, ಕಟ್ಟೀಮನಿಯವರ ಮೊದಲೆರಡು ಕಾದಂಬರಿಗಳು ಸ್ವಾತಂತ್ರ್ಯ ಹೋರಾಟವನ್ನು ಕುರಿತಾಗಿ ಬರೆದಂಥವು. ಆ ಬಳಿಕ ಅವರು ಸಮಾಜದಲ್ಲಿ ನಡೆಯುತ್ತಿರುವ ಕಾರ್ಮಿಕ ಶೋಷಣೆ, ಸ್ತ್ರೀಶೋಷಣೆ, ಬಡವರ ಶೋಷಣೆ, ದಲಿತರ ಶೋಷಣೆ—ಇವೆಲ್ಲವಗಳ ವಿರುದ್ಧ ಕಟುವಾಗಿ ಬರೆದಿದ್ದಾರೆ.  ಕಥಾ ಸಂಕಲನ - ಸೆರೆಯಿಂದ ಹೊರಗೆ, ಆಗಸ್ಟ್ ಒಂಬತ್ತು, ಗುಲಾಬಿ ಹೂ, ಜೋಳದ ಬೆಳೆಯ ನಡುವೆ, ಜೀವನ ಕಲೆ, ಸುಂಟರಗಾಳಿ, ಸೈನಿಕನ ಹೆಂಡತಿ, ಹುಲಿಯಣ್ಣನ ಮಗಳು, ಗರಡಿಯಾಳು. ನಾಟಕ ...

READ MORE

Related Books