ಸಂಗ್ರಹ ಭಾಗವತ

Author : ದೇವುಡು ನರಸಿಂಹಶಾಸ್ತ್ರಿಗಳು

Pages 347

₹ 4.00




Year of Publication: 1950
Published by: ದೇವುಡು
Address: ಬೆಂಗಳೂರು

Synopsys

ಭಾಗವತವು ಭಕ್ತಿ ಪೂರ್ಣವಾದ ಗ್ರಂಥ. ಭಕ್ತಿ ಇಲ್ಲದವರೂ ಭಕ್ತರಾಗುತ್ತಾರೆ. ಅಂತಹ ಅರ್ಥಗರ್ಭಿತ ಕಥೆಗಳನ್ನು ಒಳಗೊಂಡಿದೆ. ಭಕ್ತ ಪ್ರಹ್ಲಾದನ ಕಥೆ ಇದರಲ್ಲಿ ಅತ್ಯಂತ ಪ್ರಭಾವಶಾಲಿ. ಭಾಗವತದಲ್ಲಿ ವೇದಾಂತ ಶಾಸ್ತ್ರವೂ ಇದೆ. ಭಾಗವತವು ವಿಷ್ಣುವಿನ ಹಾಗೂ ಶ್ರೀಕೃಷ್ಣನ ವಿರಾಟ ಸ್ವರೂಪವನ್ನು ತಿಳಿಸುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಚಿತ್ರಗಳು ಇದ್ದು, ಗ್ರಂಥದ ಆಕರ್ಷಣೆ  ಹಾಗೂ ಪರಿಣಾಮಕತೆಯನ್ನು ಹೆಚ್ಚಿಸಿದೆ.

ಭಾಗವತ ಎಂದರೇನು?, ಭಾಗವತ ಹರಡಿದುದು, ಹಿರಣ್ಯಾಕ್ಷನ ವೃತ್ತಾಂತ, ಮನುವಂಶದ ಕಥೆ, ಧ್ರುವ ಚರಿತ್ರೆ, ಭರತ ಚರಿತ್ರೆ, ನಾರದರಿಗೆ ಶಾಪ ಬಂದುದು, ಭಾಗವತರೂ, ಭಾಗವತ ಧರ್ಮವೂ , ಸಮುದ್ರ ಮಥನ, ವಾಮನಾವತಾರ, ಬೃಂದಾವನ ಲೀಲೆ, ರಾಮಕೃಷ್ಣರು ಮಧುರೆಗೆ ಹೋಗುವುದು, ಯಾದವ ನಾಶ ಹೀಗೆ ವಿವಿಧ ಅಧ್ಯಾಯಗಳಡಿ ಇಡೀ ಭಾಗವತವನ್ನು ವಿವರಿಸಲು ಈ ಕೃತಿಯಲ್ಲಿ ಯತ್ನಿಸಲಾಗಿದೆ.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Related Books