ಸಂಜಯ

Author : ಎನ್. ರಂಗನಾಥಶರ್ಮಾ

Pages 102

₹ 15.00




Year of Publication: 1976
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಸಂಜಯ' ಎಂಬುದು ಮಹಾಕಾವ್ಯದ ಒಂದು ಪಾತ್ರ. ಈ ಕುರಿತು ಲೇಖಕ ಎನ್.‌ ರಂಗನಾಥಶರ್ಮಾ ವಿಶ್ಲೇಷಿಸಿದ್ದಾರೆ. ಮಹಾಭಾರತ ಯುದ್ಧದ ಕಥೆಯನ್ನೆಲ್ಲ ಯುದ್ಧ ನಡೆಯುತ್ತಿದ್ದಾಗಲೇ ಧೃತರಾಷ್ಟ್ರನಿಗೆ ವಿವರಿಸಿದ. ಧೃತರಾಷ್ಟ್ರನ ಸಾರಥಿ, ಮಂತ್ರಿಯಂತೆ ಮಹಾರಾಜನಿಗೆ ಬುದ್ಧಿವಾದ ಹೇಳಿದ ಸಾತ್ವಿಕ, ಧರ್ಮಾತ್ಮ ಸಂಜಯ ಎಂದು ಸಂಜಯನ ಕುರಿತಾಗಿ ಹೇಳಲಾಗಿದೆ. ಮಹಾಭಾರತದಲ್ಲಿ ಅಷ್ಟಾಗಿ ಕಾಣದ ಸಂಜಯನು ಎಷ್ಟು ಪ್ರಮುಖ ಪಾತ್ರ ವಹಿಸಿದ್ದಾನೆ ಎಂಬುದನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಸಂಜಯ ಇಡೀ ಮಹಾಭಾರತದಲ್ಲಿ ಕಾಣುವ ಅತ್ಯಂತ ತಾಳ್ಮೆಯ ಮನುಷ್ಯ. ವಿಶೇಷ ವರವಿದ್ದ ಆತನು ಯುದ್ದ ಭೂಮಿಯಲ್ಲಿ ನಡೆಯುತ್ತಿದ್ದ ವಿಷಯದ ವರದಿಗಳನ್ನು ರಾಜ ಧೃತರಾಷ್ಟ್ರನಿಗೆ ಅರಮನೆಯಲ್ಲೇ ಕುಳಿತು ಹೇಳುತ್ತಿದ್ದ ಬಗೆಯನ್ನು ಈ ಕೃತಿಯಲ್ಲಿ ಲೇಖಕರು ನವಿರಾಗಿ ವಿವರಿಸಿದ್ದಾರೆ.

About the Author

ಎನ್. ರಂಗನಾಥಶರ್ಮಾ
(07 January 1916 - 25 January 2014)

ವಿದ್ವಾನ್ ಎನ್. ರಂಗನಾಥಶರ್ಮಾ ಅವರು 1916 ಜನವರಿ 07ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ನಡಹಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ-ತಿಮ್ಮಪ್ಪ, ತಾಯಿ-ಜಾನಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ನಡಹಳ್ಳಿಯಲ್ಲಿ, ಮಾಧ್ಯಮಿಕ ವಿದ್ಯಾಭ್ಯಾಸವು ಸೊರಬದಲ್ಲಿ ಮುಗಿಯಿತು. ಅಗಡಿಯ ಆನಂದವನ ಆಶ್ರಮದಲ್ಲಿ ಸಂಸ್ಕೃತ ಕಲಿತ ಅವರು ನಂತರ ಕೆಳದಿ ಸಂಸ್ಕೃತ ಪಾಠಶಾಲೆಗೆ ಸೇರಿದರು. ಇದರೊಂದಿಗೆ ಖಾಸಗಿಯಾಗಿ ಮದರಾಸಿನ ವಿಶ್ವವಿದ್ಯಾಲಯದ ಕನ್ನಡ ವಿದ್ವತ್ ಮತ್ತು ಮೈಸೂರಿನ ಕನ್ನಡ ಪಂಡಿತ ಪರೀಕ್ಷೆಗಳನ್ನೂ ಪಾಸ್ ಮಾಡಿದರು. ಡಿವಿಜಿ ಅವರ ಒಡನಾಡಿ ಆಗಿದ್ದ ಅವರು ಡಿವಿಜಿ ಮರಣಾ ನಂತರ ‘ಮರಳು ಮುನಿಯನ ಕಗ್ಗ’ದ ಕರಡು ತಿದ್ದಿದವರೇ ರಂಗನಾಥ ಶರ್ಮಾ.  ಸಂಸ್ಕೃತ ಕೃತಿಗಳು: ಬಾಹುಬಲಿ ವಿಜಯಂ (ಐತಿಹಾಸಿಕ ನಾಟಕ), ಏಕಚಕ್ರಂ (ಪೌರಾಣಿಕ ನಾಟಕ, ಗುರುಪಾರಮಿತ್ರ ಚರಿತಂ, ಗೊಮ್ಮಟೇಶ್ವರ ಸುಪ್ರಭಾತಂ, ಗೊಮ್ಮಟೇಶ ...

READ MORE

Related Books