ಸಂಸ್ಕೃತ ಕಾವ್ಯ

Author : ಕೆ.ಕೃಷ್ಣಮೂರ್ತಿ

Pages 454

₹ 4.00




Year of Publication: 1955
Published by: ಮೈಸೂರು ವಿಶ್ವವಿದ್ಯಾಲಯ
Address: ಮೈಸೂರು

Synopsys

ಮೈಸೂರು ವಿ.ವಿ. ಕನ್ನಡ ಗ್ರಂಥ ಮಾಲೆಯಡಿ ಡಾ. ಕೆ. ಕೃಷ್ಣಮೂರ್ತಿ ಅವರು ಬರೆದ ಕೃತಿ ‘ಸಂಸ್ಕೃತ ಕಾವ್ಯ’ ಪ್ರಕಟಿಸಲಾಗಿದೆ. ಸಂಸ್ಕೃತ ಭಾಷೆಯು ಅತ್ಯಂತ ಪ್ರಾಚೀನ. ಸರ್ವ ಸಮರ್ಪಕವೂ ಆಗಿದೆ ಎಂಬುದು ಭಾಷಾ ವಿದ್ವಾಂಸರ ಅಭಿಪ್ರಾಯ.

ವೇದಗಳ ನಂತರ ಪುರಾಣ ಬಂದು ವಿಫುಲವಾದ ಸಾಹಿತ್ಯ ಸೃಷ್ಟಿಸಿತು. ತದನಂತರ ರಾಮಾಯಣ, ಮಹಾಭಾರತದಂತಹ ಸಾಹಿತ್ಯ ಹುಟ್ಟಿಕೊಂಡಿತು. ಇಂತಹ ಸಾಹಿತ್ಯವೆಲ್ಲವೂ ಮೂಲದಲ್ಲಿ ಸಂಸ್ಕೃತವೇ ಆಗಿದೆ. ಕಾಳಿದಾಸನ ನಂತರ ಭಾಸ, ಬಾಣ, ಮಮ್ಮಟ, ಶ್ರೀಹರ್ಷ, ಬಿಲ್ಹಣಭಟ್ಟ ಇವರ ಸಾಹಿತ್ಯವೂ ಸಂಸ್ಕೃತವೇ ಆಗಿದೆ. ಈ ಎಲ್ಲ ಪದ್ಯ-ಗದ್ಯ ರೂಪದ ಸಾಹಿತ್ಯವು ಸರಳ ಕನ್ನಡಕ್ಕೆ ಅನುವಾದವಾಗಬೇಕಿದೆ. ಆ ಪೈಕಿ, ಸಂಸ್ಕೃತ ಕಾವ್ಯ ಕೃತಿಯು ಒಂದು ಮಹತ್ವದ ಹೆಜ್ಜೆ ಎಂದು ಕೃತಿಯ ಪ್ರಧಾನ ಸಂಪಾದಕ ಡಾ. ಕೆ.ವಿ. ಪುಟ್ಟಪನವರು ಅಭಿಪ್ರಾಯಪಟ್ಟಿದ್ದಾರೆ.

About the Author

ಕೆ.ಕೃಷ್ಣಮೂರ್ತಿ

ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...

READ MORE

Related Books